ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ
ಇಂದೋರ್ (ಮಧ್ಯಪ್ರದೇಶ) – ಇಲ್ಲಿ ಪಹಲ್ಗಾಮ್ನ ಜಿಹಾದಿ ಭಯೋತ್ಪಾದಕ ದಾಳಿಯ ವಿಡಿಯೋ ನೋಡುತ್ತಿದ್ದ ಹಿಂದೂ ಯುವಕನಿಗೆ ಕೆಲವು ಮುಸ್ಲಿಮರು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
೧. ಶುಜಾಲ್ಪುರದಲ್ಲಿ ವಾಸಿಸುವ ಈ ಹಿಂದೂ ಯುವಕ ಇಂದೋರ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನು ಇಂದೋರ್-ಭೋಪಾಲ್ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದನು. ಪ್ರಯಾಣದ ಸಮಯದಲ್ಲಿ, ಅವನು ಪಹಲ್ಗಾಮ್ನ ಜಿಹಾದಿ ಭಯೋತ್ಪಾದಕ ದಾಳಿಯ ವಿಡಿಯೋ ನೋಡುತ್ತಿದ್ದನು. ಈ ಸಮಯದಲ್ಲಿ, ಮುಸ್ಲಿಂ ಯುವಕರು ಅವನನ್ನು ಸುತ್ತುವರೆದು, ‘ನಮ್ಮನ್ನು ನೋಡಿಕೊಂಡು ವಿಡಿಯೋ ನೋಡುತ್ತಿದ್ದೀಯಾ?’ ಎಂದು ಕೇಳಿದರು. ನಂತರ ಅವರು ಈ ಹಿಂದೂ ಯುವಕನನ್ನು ನಿಂದಿಸಿ ಹಲ್ಲೆ ಮಾಡಿದರು.
೨. ಆಗ ಆ ಯುವಕ ಮುಸ್ಲಿಮರಿಗೆ, ‘ನೀವು ಕೂಡ ಇದೇ ದೇಶದಲ್ಲಿ ವಾಸಿಸುತ್ತಿದ್ದೀರಿ’ ಎಂದನು. ಅದಕ್ಕೆ ಅವರು, ‘ಈ ದೇಶಭಕ್ತಿಯನ್ನು ರೈಲಿನಲ್ಲಿ ತೋರಿಸಬೇಡ. ರೈಲಿನಿಂದ ಕೆಳಗಿಳಿ, ಇಲ್ಲದಿದ್ದರೆ ೨೯ನೇ ನಂಬರ್ (ಪಹಲ್ಗಾಮ್ನಲ್ಲಿ ಭಯೋತ್ಪಾದಕರು ೨೮ ಹಿಂದೂ ಪ್ರವಾಸಿಗರನ್ನು ಕೊಂದಿದ್ದರು) ನಿನ್ನದಾಗಿರುತ್ತದೆ’, ಎಂದು ಬೆದರಿಕೆ ಹಾಕಿದರು.
೩. ಹಿಂದೂ ವಿದ್ಯಾರ್ಥಿ ಅವರನ್ನು ವಿರೋಧಿಸಿದಾಗ, ಮುಸ್ಲಿಮರು ಅವನ ಮೇಲೆ ಹಲ್ಲೆ ಮಾಡಿದರು. ಈ ಯುವಕ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾನೆ. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ಮಾಡಿದ ೨೦ ಜನರ ಶೋಧ ಕಾರ್ಯ ನಡೆಯುತ್ತಿದೆ.
೪. ‘ನಾವು ಚಂದನನಗರದಲ್ಲಿ ವಾಸಿಸುತ್ತೇವೆ. ಅಲ್ಲಿ ನಮ್ಮದೇ ಆದ ದೇಶವಿದೆ. ಅಲ್ಲಿ ನಮ್ಮ ಕಾನೂನು ನಡೆಯುತ್ತದೆ,’ ಎಂದು ಈ ಮುಸ್ಲಿಮರು ಯುವಕನಿಗೆ ಬೆದರಿಕೆ ಹಾಕಿದ್ದರು. ಚಂದನನಗರ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿದೆ.
ಸಂಪಾದಕೀಯ ನಿಲುವುದೇಶದೊಳಗಿನ ರಾಷ್ಟ್ರಪ್ರೇಮಿ ನಾಗರಿಕರು ಈಗ ತಮ್ಮ ರಕ್ಷಣೆಗಾಗಿ ಸರಕಾರ ಮಾನ್ಯತೆ ನೀಡಿದ ಆಯುಧಗಳನ್ನು ಕೈಗೆತ್ತಿಕೊಳ್ಳಬೇಕಾದ ಸಮಯ ಬಂದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ! |