89 ಅಕ್ರಮ ನಿರ್ಮಾಣಗಳು ನೆಲಸಮ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಯೋಗಿ ಆದಿತ್ಯನಾಥ ಸರಕಾರವು ಭಾರತ-ನೇಪಾಳ ಗಡಿಯಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಂಡಿದೆ. ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾದ 89 ಕಟ್ಟಡಗಳನ್ನು ಕೆಡವಲಾಗಿದೆ. ನೇಪಾಳ ಗಡಿಯ ಮದರಸಾಗಳ ಮೇಲೂ ಕ್ರಮ ಕೈಗೊಳ್ಳಲಾಗಿದ್ದು 17 ಮದರಸಾಗಳಿಗೆ ಬೀಗ ಹಾಕಲಾಗಿದೆ.
ನೇಪಾಳದ ಗಡಿಯಲ್ಲಿರುವ ಬಹರಾಯಿಚ, ಶ್ರಾವಸ್ತಿ, ಬಲರಾಮಪುರ ಮತ್ತು ಲಖಿಮಪುರ ಖೇರಿ ಜಿಲ್ಲೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಅನೇಕ ಕಡೆ ಅಕ್ರಮವಾಗಿ ನಿರ್ಮಿಸಲಾದ ಮಸೀದಿಗಳನ್ನು ಸಹ ಗುರುತಿಸಲಾಗಿದೆ. ಹಾಗೆಯೇ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರವು 5 ಕಡೆ ಮಸೀದಿ ಮತ್ತು ಮದರಸಾಗಳ ಅತಿಕ್ರಮಣವನ್ನು ಪತ್ತೆ ಹಚ್ಚಿದೆ. ಲಖಿಮಪುರ ಖೇರಿ ಜಿಲ್ಲೆಯ ಅಕ್ರಮ ನಮಾಜ್ ಸ್ಥಳಗಳ ಮೇಲೂ ಸಹ ಕ್ರಮ ಕೈಗೊಳ್ಳಲಾಗಿದೆ.