ಚೆನ್ನೈ (ತಮಿಳುನಾಡು) – ತಮಿಳುನಾಡಿನ ಸಚಿವರಾದ ವಿ. ಸೆಂಥಿಲ್ ಬಾಲಾಜಿ ಮತ್ತು ಕೆ. ಪೊನ್ಮುಡಿ ಅವರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆರ್.ಎನ್. ರವಿ ಸಚಿವರ ರಾಜೀನಾಮೆಗಳನ್ನು ಅಂಗೀಕರಿಸಿದ್ದಾರೆ. ಪೊನ್ಮುಡಿ ಅವರು ದೈಹಿಕ ಸಂಬಂಧದ ಬಗ್ಗೆ ಹಾಗೂ ಶೈವ-ವೈಷ್ಣವ ತಿಲಕದ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡುವ ಮೂಲಕ ಈ ಹಿಂದೆ ವಿವಾದವನ್ನು ಸೃಷ್ಟಿಸಿದ್ದರು.
🚨 Tamil Nadu Ministers Ponmudi & Senthil Balaji RESIGN after Supreme Court intervention!
Ponmudi’s vulgar comments on religious symbols & physical relations sparked outrage.
Isn’t it DISGRACEFUL that the highest court has to mandate the removal of corrupt individuals and those… https://t.co/Xa3GHf9Rtg pic.twitter.com/h3MlPLG3aM
— Sanatan Prabhat (@SanatanPrabhat) April 28, 2025
ಉದ್ಯೋಗದ ಹಣಕಾಸಿನ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೆಂಥಿಲ್ ಬಾಲಾಜಿಗೆ ಮದ್ರಾಸ್ ಹೈಕೋರ್ಟ್ ಜಾಮೀನು ನೀಡಿತ್ತು. ಆನಂತರ 2 ದಿನಗಳಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ಬಾಲಾಜಿ ಅವರನ್ನು ಮತ್ತೊಮ್ಮೆ ಸಚಿವರನ್ನಾಗಿ ಮಾಡಿದರು. ಈ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಓಕ್ ಮತ್ತು ನ್ಯಾಯಮೂರ್ತಿ ಎ.ಜಿ. ಮಸೀಹ್ ಇವರ ವಿಭಾಗೀಯ ಪೀಠವು, ಬಾಲಾಜಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ ನಂತರ ಅವರಿಗೆ ಜಾಮೀನು ನೀಡಲಾಗಿತ್ತು ಎಂದು ಹೇಳಿತು. ಬಾಲಾಜಿ ಸಚಿವರಾಗಿದ್ದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ಅವರು ಪುನಃ ಸಚಿವ ಸ್ಥಾನ ಪಡೆದರೆ ಅವರ ಜಾಮೀನು ರದ್ದಾಗುತ್ತದೆ ಎಂದು ಕೋರ್ಟ್ ಖಡಕ್ ಆಗಿ ಹೇಳಿತು.
ಸಂಪಾದಕೀಯ ನಿಲುವುಭ್ರಷ್ಟ ಮತ್ತು ಅಶ್ಲೀಲ ಹೇಳಿಕೆಗಳನ್ನು ನೀಡುವ ಸಚಿವರನ್ನು ಅವರ ಹುದ್ದೆಗಳಿಂದ ತೆಗೆದು ಹಾಕಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕಾಗುತ್ತಿರುವುದು ‘ನಾವು ಸಂವಿಧಾನವನ್ನು ರಕ್ಷಿಸುತ್ತೇವೆ’ ಎಂದು ಹೇಳುವ ಪಕ್ಷಗಳಿಗೆ ನಾಚಿಕೆಗೇಡಿನ ವಿಷಯ ! |