ನಾಲಾಸೋಪಾರ – ಇಲ್ಲಿನ ‘ಆರೆಂಜ್ ಹೈಟ್ಸ್’ ಕಟ್ಟಡದ ಪರಿಸರದಲ್ಲಿ ಬಹಿರಂಗವಾಗಿ ನಮಾಜ್ ಮಾಡಲಾಗುತ್ತದೆ; ಆದರೆ ಅಲ್ಲಿ ಹಿಂದೂಗಳು ಆರತಿ ಮಾಡುವುದನ್ನು ನಿಷೇಧಿಸಲಾಗಿದೆ. ಕಟ್ಟಡದ ಕೆಲವು ಮುಸ್ಲಿಮರು ಅಲ್ಲಿ ಅನಧಿಕೃತ ಮಸೀದಿಯನ್ನು ನಿರ್ಮಿಸಿ ಅದರ ಮೇಲೆ ಧ್ವನಿವರ್ಧಕಗಳನ್ನು ಹಾಕಿದ್ದಾರೆ. ನಾನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರು ಧ್ವನಿವರ್ಧಕಗಳನ್ನು ತೆಗೆದರು. ಪಹಲ್ಗಾಮ್ ಘಟನೆಯನ್ನು ವಿರೋಧಿಸುವ ಹಿಂದೂಗಳನ್ನು ತಡೆದು ಇಲ್ಲಿನ ಮುಸ್ಲಿಮರು ಬೆದರಿಕೆ ಹಾಕಿದರು.
🚨👮♂️ JUSTICE DEMANDED! 🙏
BJP leader @KiritSomaiya calls for sedition case against those threatening Hindus over #PahalgamTerroristAttack! 😡
Why no suo moto action by police?#PakistanBehindPahalgam
Allah Hu Akbar pic.twitter.com/u2VwDceYGq— Sanatan Prabhat (@SanatanPrabhat) April 28, 2025
ಪ್ರತಿಭಟನಾಕಾರರಿಂದ ಪಾಕಿಸ್ತಾನದ ಧ್ವಜವನ್ನು ಕಿತ್ತುಕೊಳ್ಳಲಾಯಿತು; ಆದರೆ ಪೊಲೀಸರು ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ಭಾಜಪ ನಾಯಕ ಮತ್ತು ಮಾಜಿ ಸಂಸದ ಕಿರಿಟ್ ಸೋಮಯ್ಯ ಆಗ್ರಹಿಸಿದ್ದಾರೆ. (ನಾಲಾಸೋಪಾರ ಹಿಂದೂ ಬಹುಸಂಖ್ಯಾತ ಮಹಾರಾಷ್ಟ್ರದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಿಂದೂಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯವಾಗಿದೆ! – ಸಂಪಾದಕರು)
ಅನಧಿಕೃತ ಮಸೀದಿ ನಿರ್ಮಿಸಿ ಧ್ವನಿವರ್ಧಕ ಹಾಕುವವರನ್ನು ಬೆಂಬಲಿಸುವ ಹಿರಿಯ ಪೊಲೀಸ ಇನ್ಸಪೆಕ್ಟರ ವಿಕಾಸ ವಳವಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹ!
ಸಂಪಾದಕೀಯ ನಿಲುವುಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ? ಪೊಲೀಸರು ಇಂತಹವರ ವಿರುದ್ಧ ಸ್ವಯಂಪ್ರೇರಿತವಾಗಿ ಮೊಕದ್ದಮೆಯನ್ನು ಏಕೆ ದಾಖಲಿಸುವುದಿಲ್ಲ? |