Anti – Hindu Statement : ‘ಭಯೋತ್ಪಾದಕರು ಧರ್ಮ ಕೇಳಿ ಗುಂಡು ಹಾರಿಸಲಿಲ್ಲ!’- ಕಾಂಗ್ರೆಸ್ ಸಚಿವ ಆರ್. ಬಿ. ತಿಮ್ಮಾಪುರ

ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಆರ್. ಬಿ. ತಿಮ್ಮಾಪುರ ಅವರ ಖೇದಕರ ಹೇಳಿಕೆ

ಬೆಂಗಳೂರು – ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ, ಭಯೋತ್ಪಾದಕರು ಅಲ್ಲಿದ್ದ ಪ್ರವಾಸಿಗರನ್ನು ಅವರ ಧರ್ಮದ ಬಗ್ಗೆ ವಿಚಾರಿಸಿರಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಸ್ವಲ್ಪ ಪ್ರಾಯೋಗಿಕವಾಗಿ ಯೋಚಿಸಿ. ಯಾರಿಗೆ ಗುಂಡು ಹಾರಿಸಬೇಕಾಗುತ್ತದೆಯೋ, ಅವನು ಯಾರ ಜಾತಿ ಅಥವಾ ಧರ್ಮವನ್ನು ವಿಚಾರಿಸುತ್ತಾನೆಯೇ? ಅವನು ಕೇವಲ ಗುಂಡು ಹಾರಿಸಿ ಅಲ್ಲಿಂದ ಹೋಗುತ್ತಾನೆ ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಆರ್. ಬಿ. ತಿಮ್ಮಾಪುರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಭಾಜಪ ಇದನ್ನು ಟೀಕಿಸಿದ್ದು, ತಿಮ್ಮಾಪುರ ಅವರ ಹೇಳಿಕೆ ಕ್ರೂರವಾಗಿದೆ ಎಂದು ಹೇಳಿದೆ. ಈ ಹಿಂದೆ ಕಾಂಗ್ರೆಸ್ ನಾಯಕ ಎಂ. ಲಕ್ಷ್ಮಣ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದೊಂದಿಗೆ ಯುದ್ಧ ಮಾಡಬಾರದು ಎಂದು ಕರೆ ನೀಡಿದ್ದರು.

ಸಂಪಾದಕೀಯ ನಿಲುವು

ತಿಮ್ಮಾಪುರ ಅವರ ಹೇಳಿಕೆಯು ದಾಳಿಯಲ್ಲಿ ಮೃತಪಟ್ಟ ಹಿಂದೂಗಳ ಕುಟುಂಬದವರಿಗೆ ಅವಮಾನ ಮಾಡುವಂತಿದೆ. ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ತಿಮ್ಮಾಪುರ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ತಕ್ಷಣ ಬಂಧಿಸಬೇಕು!