ವಾಷಿಂಗ್ಟನ್ – ಅಮೇರಿಕಾದ ಮುಖ್ಯ ತನಿಖಾ ಸಂಸ್ಥೆ ‘ಎಫ್.ಬಿ.ಐ.’ (‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’) ಮುಖ್ಯಸ್ಥ ಕಾಶ (ಕಶ್ಯಪ್) ಪಟೇಲ ಅವರು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಹಾಗೂ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಕಾಶ ಪಟೇಲ ಅವರು, ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮುಗ್ಧ ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ವ್ಯಕ್ತಿಗಳ ಸುನ್ನತಿ ಆಗಿದೆಯೇ ಎಂದು ಪರೀಕ್ಷಿಸಲು ಅವರ ಪ್ಯಾಂಟ್ ಬಿಚ್ಚಲಾಯಿತು, ಕಲಮಾ (ಅಲ್ಲಾಹನ ವೈಭವೀಕರಿಸುವ ಹೇಳಿಕೆಗಳು) ಹೇಳಲು ಕೇಳಲಾಯಿತು ಮತ್ತು ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಯಿತು. ಭಯೋತ್ಪಾದಕರು ಸಂತ್ರಸ್ತರ ಹಿಂದೂ ಗುರುತನ್ನು ಪತ್ತೆ ಹಚ್ಚಿ ಅವರನ್ನು ಹತ್ಯೆ ಮಾಡಿದರು. ಈ ಘಟನೆಯು ಮತ್ತೊಮ್ಮೆ ಭಯೋತ್ಪಾದನೆಯ ದುಷ್ಟ ಪ್ರಭಾವದಿಂದ ಜಗತ್ತಿಗೆ ಇರುವ ಅಪಾಯದ ಬಗ್ಗೆ ನಮಗೆ ನೆನಪಿಸುತ್ತದೆ. ಕಾಶ್ ಪಟೇಲ್ ಅವರು ಭಾರತೀಯ ಮೂಲದವರಾಗಿದ್ದಾರೆ ಮತ್ತು ಡೊನಾಲ್ಡ್ ಟ್ರಂಪ್ ಅವರು ಮತ್ತೆ ಅಧ್ಯಕ್ಷರಾದ ನಂತರ ಅವರನ್ನು ಈ ಹುದ್ದೆಗೆ ನೇಮಿಸಲಾಯಿತು.