ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ಗೆ ಅವರ ಸಹೋದರ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಂದ ಸಲಹೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದಾಗಿ ಘೋಷಿಸಿದೆ. ಪಾಕಿಸ್ತಾನವು ಸಹ ಭಾರತದ ಆಕ್ರಮಣಕ್ಕೆ ‘ತಕ್ಕ ಪ್ರತ್ಯುತ್ತರ’ ನೀಡುವ ಭಾಷೆಯನ್ನು ಮಾತನಾಡಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಹೋದರ ನವಾಜ್ ಷರೀಫ್ ಅವರು ಭಾರತದೊಂದಿಗೆ ಯುದ್ಧ ಮಾಡದಂತೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
🛑 Nawaz Sharif to Shehbaz Sharif: “Avoid war with India, use diplomacy!”
After India’s suspension of the Indus Waters Treaty, 🇵🇰 PM Shehbaz warns of rising war risks — but Nawaz insists on peace talks and no aggression. 🕊️#PahalgamTerroristAttack pic.twitter.com/FhymlzZmbG
— Sanatan Prabhat (@SanatanPrabhat) April 28, 2025
‘ಭಾರತದ ವಿರುದ್ಧ ಯುದ್ಧದ ಕಡೆಗೆ ಹೆಜ್ಜೆ ಹಾಕಬೇಡಿ, ಬದಲಿಗೆ ರಾಜತಾಂತ್ರಿಕವಾಗಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಿ’ ಎಂದು ನವಾಜ್ ಷರೀಫ್ ಸಲಹೆ ನೀಡಿದ್ದಾರೆ.
ಟರ್ಕಿಯಿಂದ ಪಾಕಿಸ್ತಾನಕ್ಕೆ ಡ್ರೋನ್ ಸಹಾಯ!

ಭಾರತವು ಭೂಕಂಪದ ಸಮಯದಲ್ಲಿ ದೊಡ್ಡ ಸಹಾಯವನ್ನು ಮಾಡಿದ್ದರೂ, ಟರ್ಕಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಭಾರತದ ವಿರುದ್ಧ ಹೋರಾಡಲು ಟರ್ಕಿ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ. ಟರ್ಕಿಯ ವಾಯುಪಡೆಯ ಸರಕು ಸಾಗಣೆ ವಿಮಾನವು ಏಪ್ರಿಲ್ 27 ರಂದು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಈ ವಿಮಾನದಲ್ಲಿ ಟರ್ಕಿಯ ‘ಬಾಯರಕತಾರ’ ಡ್ರೋನ್ಗಳು ಮತ್ತು ಇತರ ಶಸ್ತ್ರಾಸ್ತ್ರಗಳಿವೆ. ಟರ್ಕಿ ಒಟ್ಟು 6 ಸರಕು ಸಾಗಣೆ ವಿಮಾನಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ. ಈ ವಿಮಾನಗಳನ್ನು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲೂ ಇಳಿಸಲಾಗಿದೆ. (ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಇಂತಹ ಸಹಾಯ ಮಾಡುವ ಒಂದು ದೇಶವಾದರೂ ಜಗತ್ತಿನಲ್ಲಿ ಇದೆಯೇ? – ಸಂಪಾದಕರು)
ಭಯೋತ್ಪಾದಕರಿಗೆ ಸಹಾಯ ಮಾಡಿದ 15 ಕಾಶ್ಮೀರಿ ಮುಸ್ಲಿಮರ ಗುರುತು ಪತ್ತೆ
ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ ಭಯೋತ್ಪಾದಕರಿಗೆ ಸ್ಥಳೀಯ ಕಾಶ್ಮೀರಿ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಪೈಕಿ 15 ಮುಸ್ಲಿಮರ ಗುರುತು ಪತ್ತೆಯಾಗಿದೆ. (ಇವರನ್ನು ಹಿಡಿದು ಗಲ್ಲಿಗೇರಿಸುವ ಪ್ರಯತ್ನವಾಗಬೇಕು, ಆಗ ಮಾತ್ರ ಇತರರಿಗೆ ಭಯ ಹುಟ್ಟುತ್ತದೆ! ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದಿರಲು ಅಲ್ಲಿನ ಜಿಹಾದಿ ಮನಸ್ಥಿತಿಯ ಮುಸ್ಲಿಮರೇ ಕಾರಣ. ಅವರಿಗೆ ಅಭಿವೃದ್ಧಿ ಬೇಕು; ಆದರೆ ಹಿಂದೂಗಳು ಮತ್ತು ಭಾರತದ ಹಸ್ತಕ್ಷೇಪ ಬೇಡ. ಅದಕ್ಕಾಗಿಯೇ ಹಿಂದೂಗಳ ಪುನರ್ವಸತಿ ಅಲ್ಲಿ ಸಾಧ್ಯವಾಗಿಲ್ಲ. ಹಿಂದೂ ರಾಷ್ಟ್ರದಲ್ಲಿ ಈ ಪರಿಸ್ಥಿತಿಯನ್ನು ಬದಲಾಯಿಸಲಾಗುವುದು! – ಸಂಪಾದಕರು) ರಾಷ್ಟ್ರೀಯ ತನಿಖಾ ಸಂಸ್ಥೆ ಅವರಿಗಾಗಿ ಹುಡುಕಾಟ ನಡೆಸುತ್ತಿದೆ. ಈ ಸ್ಥಳೀಯ ಮುಸ್ಲಿಮರು ಭಯೋತ್ಪಾದಕರಿಗೆ ಸಾಮಗ್ರಿಗಳ ವ್ಯವಸ್ಥೆ ಮಾಡುವುದರ ಜೊತೆಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ದಾಸ್ತಾನು ಸಹ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ 15 ಜನರಲ್ಲಿ 3 ಜನರನ್ನು ಬಂಧಿಸಲಾಗಿದೆ. ಈ ದಾಳಿಯೊಂದಿಗೆ ಅವರ ಸಂಬಂಧವನ್ನು ಪತ್ತೆಹಚ್ಚಲು 200 ಕ್ಕೂ ಹೆಚ್ಚು ಮುಸ್ಲಿಮರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಯೋತ್ಪಾದಕರು ಇನ್ನೂ ಪಹಲ್ಗಾಮ್ ನ ದಟ್ಟವಾದ ಕಾಡಿನಲ್ಲಿ ಅಡಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ.