ಮುಂಬಯಿ – ಪಹಲ್ಗಾಮ್ನ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಸಾಂತಾಕ್ರೂಜ್ (ಪೂರ್ವ)ದಲ್ಲಿ ಕೆಲವು ಹಿಂದೂ ಯುವಕರು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ನ ಧ್ವಜಗಳ ಮೇಲೆ ‘ಮುರ್ದಾಬಾದ್’ ಎಂದು ಬರೆದು ಈ ಪ್ರದೇಶದಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದರು. ಇದರಿಂದ ಕೆಲವು ಸ್ಥಳೀಯ ಮುಸಲ್ಮಾನರು ಹಿಂದೂಗಳೊಂದಿಗೆ ವಾಗ್ವಾದ ನಡೆಸಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದರು. ಇದಕ್ಕೆ ಹಿಂದೂಗಳು ಪ್ರತ್ಯುತ್ತರ ನೀಡಿದ್ದರಿಂದ ಇಲ್ಲಿ ವಿವಾದ ಉಂಟಾಯಿತು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು; ಆದರೆ ಇನ್ನೂ ಈ ಪ್ರದೇಶದಲ್ಲಿ ಉದ್ವಿಗ್ನ ಶಾಂತತೆ ನೆಲೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 30ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಾಂತಾಕ್ರೂಜ್ (ಪೂರ್ವ)ದ ಬನಾರಸಿ ಹೋಟೆಲ್ ಬಳಿಯ ಶ್ರೀ ಘಂಟೇಶ್ವರ ದೇವಸ್ಥಾನದ ಬಳಿ ಏಪ್ರಿಲ್ 26 ರ ರಾತ್ರಿ ಈ ಘಟನೆ ನಡೆದಿದೆ. ವಾಗ್ವಾದದ ನಂತರ ಹಿಂದೂ ಯುವಕರು ಅಂಟಿಸಿದ್ದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ ವಿರೋಧಿ ಭಿತ್ತಿಪತ್ರಗಳನ್ನು ತೆಗೆದುಹಾಕಲಾಗಿದೆ. (ಭಿತ್ತಿಪತ್ರಗಳನ್ನು ಏಕೆ ತೆಗೆದುಹಾಕಲಾಯಿತು? ಭಿತ್ತಿಪತ್ರಗಳನ್ನು ತೆಗೆದುಹಾಕುವುದರಿಂದ ಸಾಮಾಜಿಕ ಶಾಂತಿಯನ್ನು ಕಾಪಾಡಲಾಗುವುದಿಲ್ಲ, ಆದರೆ ಈ ಭಿತ್ತಿಪತ್ರಗಳಿಂದ ಹೊಟ್ಟೆನೋವು ಅನುಭವಿಸುವವರನ್ನು ಹತೋಟಿಗೆ ತಂದರೆ ಮಾತ್ರ ಸಮಾಜದಲ್ಲಿ ನಿಜವಾದ ಶಾಂತಿ ನೆಲೆಸುತ್ತದೆ! – ಸಂಪಾದಕರು) ಸುರಕ್ಷತೆಯ ಕಾರಣಗಳಿಗಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Muslims in Santacruz tried to spark a riot over the Pakistan flag being used during a protest against the #PahalgamTerroristAttack!
Why should India shelter Pakistan loyalists? Punish them hard — and send them packing to Pakistan! 🇮🇳#Pakistan_Behind_Pahalgam
VC: @wordofindia pic.twitter.com/Zfz48Yy1lW— Sanatan Prabhat (@SanatanPrabhat) April 27, 2025
ಸಂಪಾದಕೀಯ ನಿಲುವುಪಾಕಿಸ್ತಾನದ ಬಗ್ಗೆ ನಿಷ್ಠೆ ಹೊಂದಿರುವ ಮುಸಲ್ಮಾನರನ್ನು ಭಾರತವು ಏಕೆ ಪೋಷಿಸಬೇಕು? ಅವರಿಗೆ ಮೊದಲು ಕಠಿಣ ಶಿಕ್ಷೆ ವಿಧಿಸಿ, ಅದನ್ನು ಅನುಭವಿಸಿದ ನಂತರ ಪಾಕಿಸ್ತಾನಕ್ಕೆ ಗಡಿಪಾರು ಮಾಡುವುದು ಅವಶ್ಯಕ! |