ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸಿದ ನಂತರ, ಪಾಕಿಸ್ತಾನಕ್ಕೆ ಹೋಗುವ ನೀರನ್ನು ನಿಲ್ಲಿಸಲು 3 ಹಂತಗಳಲ್ಲಿ ಪ್ರಯತ್ನ ಮಾಡುವೆವು!

ನವದೆಹಲಿ – ಪಾಕಿಸ್ಥಾನಕ್ಕೆ ಸಿಂಧೂ ನದಿ ನೀರು ಒಪ್ಪಂದದಡಿಯಲ್ಲಿ ನೀಡಲಾಗುತ್ತಿರುವ ನೀರನ್ನು ನಿಲ್ಲಿಸುವುದಕ್ಕಾಗಿ ಭಾರತವು ಪ್ರಯತ್ನಗಳನ್ನು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಕೇಂದ್ರೀಯ ನೀರು ಸರಬರಾಜು (ಜಲ ಶಕ್ತಿ) ಸಚಿವಾಲಯವು ಸಭೆಯನ್ನು ಆಯೋಜಿಸಿತ್ತು. ಇದರಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಕೇಂದ್ರೀಯ ನೀರು ಸರಬರಾಜು ಸಚಿವ ಸಿ.ಆರ್. ಪಾಟೀಲ್ ಭಾಗವಹಿಸಿದ್ದರು. ಇದರಲ್ಲಿ ಈ ನೀರನ್ನು 3 ಹಂತಗಳಲ್ಲಿ ನಿಲ್ಲಿಸಲು ಯೋಜಿಸಲಾಗಿತ್ತು; ಆದರೆ ಈ 3 ಹಂತಗಳು ಯಾವುವು ಎಂಬುದನ್ನು ಹೇಳಲಾಗಿಲ್ಲ. ಈ ಸಂದರ್ಭದಲ್ಲಿ 3 ರೀತಿಯ ಕಾರ್ಯತಂತ್ರಗಳನ್ನು ರೂಪಿಸಲು ಯೋಜಿಸಲಾಗುತ್ತಿದೆ ಎಂದು ಕೇಂದ್ರೀಯ ನೀರು ಸರಬರಾಜು ಸಚಿವ ಸಿ.ಆರ್. ಪಾಟೀಲ್ ಹೇಳಿದರು. ಆ ಮೂಲಕ ಪಾಕಿಸ್ತಾನಕ್ಕೆ ಒಂದು ಹನಿ ನೀರು ಕೂಡ ಸಿಗುವುದಿಲ್ಲ ಎಂದರು.

ನಾವು ಎಂದಿಗೂ ಸಿಂಧೂ ನದಿ ನೀರು ಒಪ್ಪಂದದ ಪರವಾಗಿ ಇರಲಿಲ್ಲ! – ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಜಮ್ಮು- ಕಾಶ್ಮೀರದ ವಿಷಯಕ್ಕೆ ಬಂದರೆ, ನಾವು ಎಂದಿಗೂ ಸಿಂಧೂ ನದಿ ನೀರು ಒಪ್ಪಂದದ ಪರವಾಗಿ ಇರಲಿಲ್ಲ ಎಂದು ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಸಿಂಧೂ ನದಿ ನೀರು ಒಪ್ಪಂದವು ನಮ್ಮ ಜನರಿಗೆ ಅತ್ಯಂತ ಕೆಟ್ಟ ಒಪ್ಪಂದ ಎಂದು ನಾವು ಯಾವಾಗಲೂ ನಂಬಿದ್ದೇವೆ. ಇದು ಕಾಶ್ಮೀರಕ್ಕಾಗಿ ಹಾನಿಕಾರಕ ಇದೆ ಎಂದಿದ್ದಾರೆ.