ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ್ ಅವರಿಗೆ ‘ಓಂ ಶಿವಶಕ್ತಿ ಓಂ’ ಪುರಸ್ಕಾರ ನೀಡಿ ಗೌರವಿಸಲಾಗುವುದು!

ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್’ ವತಿಯಿಂದ ನೀಡಲಾಗುವ ಪುರಸ್ಕಾರ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಕೊಚ್ಚಿ (ಕೇರಳ) – ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ವತಿಯಿಂದ ನೀಡಲಾಗುವ ‘ಓಂ ಶಿವಶಕ್ತಿ ಓಂ ಪುರಸ್ಕಾರ’ ಈ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ್ ಅವರಿಗೆ ಘೋಷಿಸಲಾಗಿದೆ. ತಮ್ಮ ಆಂತರಿಕ ಶಕ್ತಿ, ದೃಢ ನಿಶ್ಚಯ ಮತ್ತು ಕೃಪಾಶೀರ್ವಾದದ ಮೂಲಕ ನಾಯಕತ್ವ ವಹಿಸಿ ಮಾರ್ಗದರ್ಶನ ನೀಡುವ ಮಹಿಳೆಯರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ್ ಅವರೊಂದಿಗೆ ತಮಿಳುನಾಡಿನ ಗೂಡಲೂರುನ ಚಿಂತಾಮಣಿ ವಾಘೇಶ್ವರಿ ಮೂಕಾಂಬಿಕಾ ದೇವಾಲಯದ ಮಠಾಧಿಪತಿ ಪ.ಪೂ. ಡಾ. ಬ್ರಹ್ಮ ಯೋಗಿನಿ ಶ್ರೀ ಶ್ರೀ ಶ್ರೀ ಮಾತಾ ಅಂಬಿಕಾ ಚೈತನ್ಯಮಯಿ ಅವರಿಗೂ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು.

‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ವತಿಯಿಂದ ನೀಡಲಾಗುವ ‘ಓಂ ಶಿವಶಕ್ತಿ ಓಂ ಪ್ರಶಸ್ತಿ’

ಆದಿಶಂಕರಾಚಾರ್ಯ ಜಯಂತಿಯಂದು, ಅಂದರೆ ಮೇ ೨ ರಂದು ಈ ಪುರಸ್ಕಾರವನ್ನು ನೀಡಲಾಗುವುದು. ಈ ಹಿಂದೆ ‘ಶಕ್ತಿವೇದ ವೆಲ್ನೆಸ್ ಮಿಷನ್’ನ ಪ.ಪೂ. ಮಾತಾಜಿ ಡಾ. ಶ್ರೀಪ್ರಿಯಾ ಮತ್ತು ‘ಶ್ರೀ ಸಂತಾನಂದ ಮಠ ಋಷಿ ಜ್ಞಾನ ಸಾಧನಾಲಯಂ’ನ ಪ.ಪೂ. ಸ್ವಾಮಿನಿ ದೇವಿ ಜ್ಞಾನಭಾ ನಿಷ್ಠಾನಂದ ಗಿರಿ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ‘ಓಂ ಶಿವಶಕ್ತಿ ಓಂ ಪುರಸ್ಕಾರ’ದೊಂದಿಗೆ ಈ ಬಾರಿ ‘ಮಾಯಿಲ್ಪಿಲಿ ಪುರಸ್ಕಾರ’ವನ್ನೂ ನೀಡಲಾಗುವುದು. ಈ ಪುರಸ್ಕಾರವನ್ನು ಆರೋಗ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸನಾತನ ಎಲಂ ವಾಸ್ತೂರತ್ನದ ಕುಲಪತಿ ಹಾಗೂ ಮುಖ್ಯ ತಂತ್ರಿ (ಪೂಜಾರಿ) ಬ್ರಹ್ಮ ಶ್ರೀ ಡಾ. ಸೋಮನಾಥ ರಾಘವನ್ ಆಚಾರ್ಯ ಇರಲಿದ್ದಾರೆ, ಹಾಗೆಯೇ ಗೌರವಾನ್ವಿತ ಅತಿಥಿಗಳಾಗಿ ‘ಕೃಷ್ಣಾ ಬೀಚ್ ರಿಸಾರ್ಟ’ನ ‘ಶಿವೋಹಂ ಸ್ಪಿರಿಚ್ಯುಯಲ್ ವೆಲ್ನೆಸ್ ಸೆಂಟರ್’ನ ಮುಖ್ಯ ವೈದ್ಯೆ ಡಾ. ಜ್ಯೋತಿ ಶಮಿತ್ ಇರಲಿದ್ದಾರೆ.

‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ಕುರಿತು ಕಿರು ಮಾಹಿತಿ…

‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ವತಿಯಿಂದ ಆಧ್ಯಾತ್ಮ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಲು ಸಮಾಜದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ‘ಓಂ ಶಿವಶಕ್ತಿ ಓಂ ಪುರಸ್ಕಾರ’, ಮಾಯಿಲ್ಪಿಲಿ ಪುರಸ್ಕಾರ ಮುಂತಾದ ಪುರಸ್ಕಾರಗಳನ್ನು ನೀಡಲಾಗುತ್ತದೆ. ಈ ಟ್ರಸ್ಟ್ ವತಿಯಿಂದ ಕೇರಳದ ‘ಕೃಷ್ಣಾ ಬೀಚ್ ರಿಸಾರ್ಟ್’ನಲ್ಲಿ ಕೇಂದ್ರವನ್ನು ನಡೆಸಲಾಗುತ್ತಿದೆ. ಈ ಕೇಂದ್ರದಲ್ಲಿ ‘ಯೋಗ, ಧ್ಯಾನ ಮುಂತಾದವುಗಳ ಮೂಲಕ ಒತ್ತಡ ರಹಿತ ಜೀವನವನ್ನು ಹೇಗೆ ನಡೆಸುವುದು?’ ಎಂಬುದರ ಕುರಿತು ಸಲಹೆ ನೀಡಲಾಗುತ್ತದೆ. ಈ ಸಂಸ್ಥೆಯು ವಿಶ್ವಸಂಸ್ಥೆಯ ‘ಯು.ಎನ್. ಗ್ಲೋಬಲ್ ಕಾಂಪ್ಯಾಕ್ಟ್’ಗೆ ಸಂಯೋಜಿತವಾಗಿದೆ. ಇದು ವಿಶ್ವಸಂಸ್ಥೆಯ ಕಾರ್ಯತಂತ್ರದ ಉಪಕ್ರಮವಾಗಿದೆ. ಈ ಉಪಕ್ರಮದ ಮೂಲಕ ಮಾನವ ಹಕ್ಕುಗಳು, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ಸಂಸ್ಥೆಗಳಿಗೆ ಸಹಕಾರ ಮತ್ತು ಬೆಂಬಲ ನೀಡಲಾಗುತ್ತದೆ.