Congress Leader : ‘ಪಹಲ್ಗಾಮ್‌ನಲ್ಲಿ ಯಾರನ್ನೂ ಅವರ ಧರ್ಮವನ್ನು ಕೇಳಿ ಕೊಲ್ಲಲ್ವಂತೆ!’

ರಾಜ್ಯದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಇವರಿಂದ ದೇಶ ಮತ್ತು ಹಿಂದೂ ದ್ರೋಹಿ ಹೇಳಿಕೆ !

ಮೈಸೂರು – ಪಹಲ್ಗಾಮ್‌ನಲ್ಲಿ ಮುಸಲ್ಮಾನರು ಅನೇಕ ಜನರ ಪ್ರಾಣ ಉಳಿಸಿದ್ದಾರೆ. ಅಲ್ಲಿ ಯಾರನ್ನೂ ಅವರ ಧರ್ಮವನ್ನು ಕೇಳಿ ಕೊಲ್ಲಲಿಲ್ಲ. ಸುಮ್ಮನೆ ಮುಸಲ್ಮಾನ, ಮುಸಲ್ಮಾನ ಎಂದು ಭಾಜಪ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಇಲ್ಲಿ ಹೇಳಿದ್ದಾರೆ.

ಲಕ್ಷ್ಮಣ್ ಇವರು ಮಾತು ಮುಂದುವರಿಸಿ,

. ದೇಶದ ಜನರ ರಕ್ತ ಹರಿಸಿ ಅಧಿಕಾರ ಪಡೆಯುವುದು ಭಾಜಪದ ಅಭ್ಯಾಸ. ಘಟನೆ ನಡೆದ ದಿನ ಅಲ್ಲಿ ಸೈನ್ಯ ಮತ್ತು ಪೊಲೀಸರು ಏಕೆ ಇರಲಿಲ್ಲ? ಇದರ ಹಿಂದೆ ಬೇರೆಯದೇ ಉದ್ದೇಶವಿದೆ. ಈ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು. (ಈ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಮುಂಬಯಿ ಮೇಲಿನ ೨೬ ನವೆಂಬರ್ ೨೦೦೮ ರ ಭಯೋತ್ಪಾದಕ ದಾಳಿಯ ಸಂಚು ರೂಪಿಸಿತ್ತು ಮತ್ತು ಅದು ಹಿಂದೂ ಭಯೋತ್ಪಾದಕ ದಾಳಿ ಎಂದು ತೋರಿಸಲು ಪ್ರಯತ್ನಿಸಿತು; ಆದರೆ ಕಸಬ್ ಪೊಲೀಸರಿಗೆ ಜೀವಂತವಾಗಿ ಸಿಕ್ಕಿಬಿದ್ದ ಮತ್ತು ಕಾಂಗ್ರೆಸ್‌ನ ತಂತ್ರ ವಿಫಲವಾಯಿತು ಎಂಬ ಹೇಳಿಕೆಯ ತನಿಖೆ ನಡೆಸಿ ಅದರ ಮಾಹಿತಿಯನ್ನು ಕೇಂದ್ರದ ಭಾಜಪ ಸರಕಾರವು ದೇಶದ ಜನರ ಮುಂದೆ ಇಡುವುದು ಈಗ ಅವಶ್ಯಕವಾಗಿದೆ! – ಸಂಪಾದಕರು)

. ಹಿಂದೂ ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸಿ ಚುನಾವಣೆ ಗೆಲ್ಲುವುದು ಭಾಜಪಯ ಉದ್ದೇಶ. ‘ಎಲ್ಲಾ ಮುಸಲ್ಮಾನರು ಭಯೋತ್ಪಾದಕರು’ ಎಂದು ತೋರಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. (ಎಲ್ಲಾ ಮುಸಲ್ಮಾನರು ಭಯೋತ್ಪಾದಕರು ಎಂದು ಯಾರೂ ಹೇಳುವುದಿಲ್ಲ; ಆದರೆ ಭಯೋತ್ಪಾದಕರಾಗಿರುವ ಮುಸಲ್ಮಾನರನ್ನು ಕಾಂಗ್ರೆಸ್ ಎಂದಿಗೂ ಮುಸಲ್ಮಾನ ಭಯೋತ್ಪಾದಕರು ಎಂದು ಏಕೆ ಕರೆಯುವುದಿಲ್ಲ?, ಇದಕ್ಕೆ ಲಕ್ಷ್ಮಣ್ ಉತ್ತರಿಸಬೇಕು! – ಸಂಪಾದಕರು)

(ಹೇಳಿ)‘೪ ಮರಗಳಿಗೆ ಗುಂಡು ಹಾರಿಸಿ ಭಾಜಪ ಅದನ್ನು ‘ಸರ್ಜಿಕಲ್ ಸ್ಟ್ರೈಕ್’ ಎಂದು ತೋರಿಸಿತು!’

‘೪ ಮರಗಳಿಗೆ ಗುಂಡು ಹಾರಿಸಿ ಭಾಜಪ ಅದನ್ನು ‘ಸರ್ಜಿಕಲ್ ಸ್ಟ್ರೈಕ್’ ಎಂದು ತೋರಿಸಿತು. ಈ ರೀತಿ ಜನರನ್ನು ಮೂರ್ಖರನ್ನಾಗಿಸುವುದು ಭಾಜಪದ ಕೆಲಸ’ ಎಂದು ಲಕ್ಷ್ಮಣ್ ಆರೋಪಿಸಿದರು. (ಈ ಆರೋಪವನ್ನು ಲಕ್ಷ್ಮಣ್ ಸಾಬೀತುಪಡಿಸಬೇಕು, ಇಲ್ಲದಿದ್ದರೆ ಕೇಂದ್ರ ಸರಕಾರವು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಎಂ. ಲಕ್ಷ್ಮಣ್ ವಿರುದ್ಧ ತಕ್ಷಣವೇ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಮತ್ತು ತ್ವರಿತ ಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆಯಾಗುವಂತೆ ಕೇಂದ್ರ ಸರಕಾರ ಪ್ರಯತ್ನಿಸಬೇಕು, ಆಗ ಮಾತ್ರ ಜಿಹಾದಿ ಭಯೋತ್ಪಾದಕ ಪ್ರೇಮಿಗಳು ಮತ್ತು ಹಿಂದೂ ದ್ರೋಹಿ ಕಾಂಗ್ರೆಸ್ಸಿಗರ ತಲೆ ಸರಿ ದಾರಿಗೆ ಬರುತ್ತದೆ !