Misuse Of National Symbols : ರಾಷ್ಟ್ರೀಯ ಚಿಹ್ನೆಗಳ ದುರ್ಬಳಕೆಯ ಮೇಲೆ ನಿಷೇಧ ಹೇರಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು – ಕರ್ನಾಟಕ ಹೈಕೋರ್ಟ್‌ ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳ (ರಾಷ್ಟ್ರಧ್ವಜ, ಅಶೋಕ ಚಕ್ರ ಇತ್ಯಾದಿ) ದುರ್ಬಳಕೆಯನ್ನು ನಿಷೇಧಿಸಿದೆ. ಈ ಚಿಹ್ನೆಗಳನ್ನು ಅನುಮತಿ ಪಡೆದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಮಾತ್ರ ಬಳಸಬಹುದು ಎಂದು ಹೈಕೋರ್ಟ್‌ ಹೇಳಿದೆ. ಯಾರೂ ಅವುಗಳನ್ನು ತಪ್ಪಾಗಿ ಅಥವಾ ವೈಯಕ್ತಿಕ ಲಾಭಕ್ಕಾಗಿ ಬಳಸುವಂತಿಲ್ಲ. (ಇದನ್ನು ನ್ಯಾಯಾಲಯ ಏಕೆ ಹೇಳಬೇಕು, ಸರಕಾರಕ್ಕೆ ಅರ್ಥವಾಗುವುದಿಲ್ಲವೇ? – ಸಂಪಾದಕರು)

1. ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ ಅವರ ಪೀಠವು, ‘ರಾಷ್ಟ್ರೀಯ ಲಾಂಛನ ಮತ್ತು ರಾಷ್ಟ್ರೀಯ ಚಿಹ್ನೆಗಳು ರಾಷ್ಟ್ರದ ಹೆಮ್ಮೆ, ಗೌರವ ಮತ್ತು ಸಾರ್ವಭೌಮತ್ವದ ಸಂಕೇತಗಳಾಗಿವೆ’ ಎಂದು ಹೇಳಿದೆ.

2. ಯಾವುದೇ ಸರಕಾರಿ ಹುದ್ದೆ ಹೊಂದಿರದ ಮಾಜಿ ಸಂಸದರು ಅಥವಾ ಮಾಜಿ ಶಾಸಕರು ಸಹ ತಮ್ಮ ಲೆಟರ್ ಹೆಡ್ ಮತ್ತು ವಾಹನಗಳ ಮೇಲೆ ರಾಷ್ಟ್ರೀಯ ಚಿಹ್ನೆಗಳು, ರಾಷ್ಟ್ರಧ್ವಜವನ್ನು ಅನೇಕ ಬಾರಿ ಬಳಸುತ್ತಾರೆ ಎಂದು ಹೈಕೋರ್ಟ್‌ ಹೇಳಿದೆ. ಹೈಕೋರ್ಟ್‌ ಇದನ್ನು ತಪ್ಪು ಮತ್ತು ಖಂಡನೀಯ ಎಂದು ತೀರ್ಮಾನಿಸಿದೆ.

3. ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆ, 1950 ಮತ್ತು ಭಾರತೀಯ ರಾಷ್ಟ್ರೀಯ ಲಾಂಛನ ಕಾಯಿದೆ, 2005 ರ ಪ್ರಕಾರ ಸರಕಾರವು ಇದರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ.

4. ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳ ದುರ್ಬಳಕೆ ಎಲ್ಲಿ ಕಂಡುಬಂದರೂ, ಸರಕಾರಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಾನೂನಿನ ಪ್ರಕಾರ ತಕ್ಷಣ ಪ್ರಕರಣ ದಾಖಲಿಸಬೇಕು.

5. ಹೈಕೋರ್ಟ್‌ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ, ಯಾವುದೇ ವ್ಯಕ್ತಿಯು ಅನುಮತಿಯಿಲ್ಲದೆ ತನ್ನ ವಾಹನದ ಮೇಲೆ ರಾಷ್ಟ್ರೀಯ ಚಿಹ್ನೆ ಅಥವಾ ಲಾಂಛನಗಳನ್ನು ಹಾಕಿದರೆ, ಆ ವ್ಯಕ್ತಿಗೆ ದಂಡ ವಿಧಿಸಬೇಕು ಅಥವಾ ಅವರ ಡ್ರೈವಿಂಗ್‌ ಲೈಸೆನ್ಸ್ ಅನ್ನು ರದ್ದುಗೊಳಿಸಬೇಕು ಎಂದು ನಿಯಮಗಳನ್ನು ರೂಪಿಸುವಂತೆ ತಿಳಿಸಿದೆ.

6. ರಾಷ್ಟ್ರೀಯ ಚಿಹ್ನೆಗಳು, ರಾಷ್ಟ್ರೀಯ ಲಾಂಛನಗಳು ಮತ್ತು ಹೆಸರುಗಳು ನಮ್ಮ ವೈಭವಯುತ ಇತಿಹಾಸ, ಸಂಸ್ಕೃತಿ, ಆದರ್ಶಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಅವು ನಮ್ಮ ದೇಶದ ಗುರುತು ಎಂದು ನ್ಯಾಯಾಲಯ ಹೇಳಿದೆ.