Terror Attack : ‘ಇಸ್ಲಾಂನಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ!’

ಜಮೀಯತ್ ಉಲೆಮಾ-ಎ-ಹಿಂದ್ ನ ಎರಡೂ ಗುಂಪುಗಳಿಂದ ಪಹಲ್ಗಾಮ ದಾಳಿಯ ಖಂಡನೆ

ಮೌಲಾನಾ ಮಹಮೂದ ಮದನಿ ಮತ್ತು ಮೌಲಾನಾ ಅರ್ಷದ್ ಮದನಿ

ಸಹಾರನಪುರ (ಉತ್ತರ ಪ್ರದೇಶ) – ಮುಸಲ್ಮಾನರ ಧಾರ್ಮಿಕ ಸಂಘಟನೆ ‘ಜಮೀಯತ್ ಉಲೆಮಾ-ಎ-ಹಿಂದ್’ನ ಎರಡೂ ಬಣಗಳು ಪಹಲ್ಗಾಮ್ ನ ಜಿಹಾದಿ ಭಯೋತ್ಪಾದಕ ದಾಳಿಯನ್ನು ಖಂಡಿಸಿವೆ. ಜಮೀಯತ್ ಅಧ್ಯಕ್ಷ ಮೌಲಾನಾ (ಇಸ್ಲಾಂ ವಿದ್ವಾಂಸ) ಅರ್ಷದ್ ಮದನಿ ಅವರು ಮಾತನಾಡಿ, ಅಮಾಯಕರನ್ನು ಕೊಲ್ಲುವವರು ಮನುಷ್ಯರಲ್ಲ, ಅವರು ಪ್ರಾಣಿಗಳು. ಇಸ್ಲಾಂನಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಎಂದರು.

ಜಮೀಯತ್ ನ ಇನ್ನೊಂದು ಬಣದ ಮುಖ್ಯಸ್ಥ ಮೌಲಾನಾ ಮಹಮೂದ ಮದನಿ ಅವರು ಈ ಘಟನೆಯನ್ನು ‘ಅಮಾನವೀಯ ಕೃತ್ಯ’ ಎಂದು ಕರೆದಿದ್ದಾರೆ. ಈ ಘಟನೆಯನ್ನು ಯಾವುದೇ ಧರ್ಮಕ್ಕೆ ಜೋಡಿಸಲಾಗುವುದಿಲ್ಲ ಮತ್ತು ಅದನ್ನು ಇಸ್ಲಾಂಗೆ ಜೋಡಿಸಲು ಪ್ರಯತ್ನಿಸುವವರಿಗೆ ಅದರ ನಿಜವಾದ ಬೋಧನೆಗಳ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದರು. (ಇಸ್ಲಾಂನ ನಿಜವಾದ ಬೋಧನೆ ಏನು ಎಂಬುದನ್ನು ಮದನಿ ಅವರು ಭಾರತೀಯರಿಗೆ ಈಗ ಸ್ಪಷ್ಟವಾಗಿ ಹೇಳಬೇಕು ಮತ್ತು ಜಿಹಾದಿ ಭಯೋತ್ಪಾದಕರಿಗೆ ಯಾವ ಇಸ್ಲಾಮೀ ಬೋಧನೆಯನ್ನು ಎಲ್ಲಿಂದ ಮತ್ತು ಏಕೆ ನೀಡಲಾಗುತ್ತಿದೆ ಎಂಬುದನ್ನೂ ಹೇಳಬೇಕು! – ಸಂಪಾದಕರು)

‘ದಾರುಲ ಉಲೂಮ್ ದೇವಬಂದ್’ ಮದರಸಾದಿಂದಲೂ ಖಂಡನೆ

ದಾರುಲ್ ಉಲೂಮ್ ದೇವಬಂದ್ ನ ‘ಮೊಹತಾಮಿಮ್’ (ವ್ಯವಸ್ಥಾಪಕ) ಮುಫ್ತಿ ಅಬುಲ್ ಕಾಸಿಂ ನೋಮಾನಿ

ಸಹಾರನಪುರದ ಪ್ರಮುಖ ಇಸ್ಲಾಮಿಕ ಮದರಸಾ ‘ದಾರುಲ್ ಉಲೂಮ್ ದೇವಬಂದ್’ ಕೂಡ ಈ ದಾಳಿಯನ್ನು ‘ಮಾನವೀಯತೆಗೆ ವಿರುದ್ಧವಾದ ಕೃತ್ಯ’ ಎಂದು ಕರೆದಿದೆ. ದಾರುಲ್ ಉಲೂಮ್ ದೇವಬಂದ್ ನ ‘ಮೊಹತಾಮಿಮ್’ (ವ್ಯವಸ್ಥಾಪಕ) ಮುಫ್ತಿ (ಶರಿಯತ್ ಕಾನೂನಿನ ಪ್ರಕಾರ ನ್ಯಾಯ ತೀರ್ಮಾನ ಮಾಡುವವರು) ಅಬುಲ್ ಕಾಸಿಂ ನೋಮಾನಿ ಅವರು ಈ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ದಾಳಿಯು ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಅಪಾಯವಾಗಿದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪವಿದೆ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಅವರು ಹೇಳಿದರು. ಕೇಂದ್ರ ಸರಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ. (ಕೇಂದ್ರ ಸರಕಾರವು ಅಂತಹ ಕ್ರಮಗಳನ್ನು ಪ್ರಾರಂಭಿಸಿದರೆ, ಇದೇ ಮುಸಲ್ಮಾನರು ಅವರಿಗಾಗಿ ಕಿರುಚಲು ಪ್ರಾರಂಭಿಸುತ್ತಾರೆ. ಸಂಸತ್ತಿನ ಮೇಲೆ ದಾಳಿ ಮಾಡಿದ ಮಹಮ್ಮದ ಅಫ್ಜಲ್ ಹಾಗೂ 1993 ರ ಮುಂಬಯಿ ದಾಳಿಯ ಭಯೋತ್ಪಾದಕ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದು ಇದೇ ಮುಸಲ್ಮಾನರು ಪ್ರತಿಭಟನೆ ನಡೆಸುತ್ತಿದ್ದರು, ಸರ್ವೋಚ್ಚ ನ್ಯಾಯಾಲಯದಲ್ಲಿ ಮಧ್ಯರಾತ್ರಿ ವಿಚಾರಣೆ ನಡೆಸುವಂತೆ ಮಾಡುತ್ತಿದ್ದರು ಎಂಬುದನ್ನು ಮರೆಯಬಾರದು! – ಸಂಪಾದಕರು)

ಸಂಪಾದಕೀಯ ನಿಲುವು

  • ಕಳೆದ 35 ವರ್ಷಗಳಿಂದ ಜಮೀಯತ್ ಗೆ ಇದು ನೆನಪಾಗಲಿಲ್ಲವೇ; ಆದರೆ ಈಗ ದೇಶದ ಹಿಂದೂಗಳು ಮುಸಲ್ಮಾನರ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದು, ಪಾಕಿಸ್ತಾನವನ್ನು ನಾಶಪಡಿಸುವುದರೊಂದಿಗೆ ದೇಶದ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಪ್ರಾರಂಭಿಸಿದ ನಂತರ ಜಮೀಯತ್ ಗೆ ಇದು ನೆನಪಾಗಿದೆ ಎಂಬುದನ್ನು ಹಿಂದೂಗಳು ಗಮನದಲ್ಲಿಟ್ಟುಕೊಂಡು ಇಂತಹ ಕಪಟ ಹೇಳಿಕೆಗಳಿಗೆ ಕಿವಿಗೊಡಬಾರದು!
  • ‘ಕಾಫಿರರನ್ನು ಕೊಲ್ಲಿರಿ, ವಿಗ್ರಹಾರಾಧಕರನ್ನು ಕೊಲ್ಲಿರಿ’ ಎಂದು ಇಸ್ಲಾಂನಲ್ಲಿ ಹೇಳಲಾಗುತ್ತದೆ, ಇದರ ಬಗ್ಗೆ ಜಮೀಯತ್ ಏಕೆ ಮಾತನಾಡುವುದಿಲ್ಲ?
  • ಮಸೀದಿಗಳಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ನಡೆಯುವ ದಾಳಿಗಳಿಗೆ ಇಸ್ಲಾಂನಲ್ಲಿ ಸ್ಥಾನವಿದೆಯೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ! ಈ ಬಗ್ಗೆ ಜಮೀಯತ್ ಇದುವರೆಗೆ ಎಂದಿಗೂ ಬಾಯಿ ತೆರೆದಿಲ್ಲ ಎಂಬುದನ್ನು ಹಿಂದೂಗಳು ಗಮನಿಸಬೇಕು!