ಪಹಲಗಾಮದಲ್ಲಿನ ದಾಳಿಯ ನಂತರ ಪಾಕಿಸ್ತಾನದ ಪರವಹಿಸಿದರು
ಗೋಹತ್ತಿ (ಆಸಾಮ) – ಆಸಾಮನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಪಕ್ಷದ ಶಾಸಕ ಅಮಿನುಲ ಇಸ್ಲಾಮರವರನ್ನು ಪಾಕಿಸ್ತಾನದ ಪರ ವಹಿಸಿದ್ದಕ್ಕಾಗಿ ದೇಶದ್ರೋಹದ ಆರೋಪದಡಿ ಬಂಧಿಸಲಾಗಿದೆ. ಇಸ್ಲಾಮರವರನ್ನು ನಾಗಾಂವ ಜಿಲ್ಲೆಯ ಅವರ ನಿವಾಸದಿಂದ ಬಂಧಿಸಲಾಗಿದೆ. ಅವರು ಧಿಂಗ ಮತಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಹಲಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಅವರು ಒಂದು ವಿಡಿಯೊವನ್ನು ಪ್ರಸಾರ ಮಾಡಿ ಪಾಕಿಸ್ತಾನವನ್ನು ಬೆಂಬಲಿಸಿದ್ದರು.
ಶಾಸಕರ ಹೇಳಿಕೆಗೆ ಎ.ಐ.ಯು.ಡಿ.ಎಫ್. ಕೂಡ ಪ್ರತಿಕ್ರಿಯಿಸಿ, ಇದು ಇಸ್ಲಾಮರವರ ವೈಯಕ್ತಿಕ ಅಭಿಪ್ರಾಯವಾಗಿದ್ದು ಪಕ್ಷದ ಅಭಿಪ್ರಾಯಗಳಲ್ಲ ಎಂದು ಹೇಳಿದೆ. ಅಧ್ಯಕ್ಷರಾದ ಬದ್ರುದ್ದೀನ ಅಜ್ಮಲರವರು, ಅಮಿನುಲ ಇಸ್ಲಾಮರವರ ಹೇಳಿಕೆ ದುರದೃಷ್ಟಕರ. ಇದು ಸರಕಾರದೊಂದಿಗೆ ನಿಲ್ಲುವ ಸಮಯವಾಗಿದೆ. ಭಯೋತ್ಪಾದಕರಿಗೆ ಯಾವುದೇ ಧರ್ಮವಿರುವುದಿಲ್ಲ. ಭಯೋತ್ಪಾದಕರು ಇಸ್ಲಾಂಗೆ ಅಪಕೀರ್ತಿ ತರುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತ್ವರಿತ ಗತಿಯ ನ್ಯಾಯಾಲಯದಲ್ಲಿ ತಕ್ಷಣ ಮೊಕದ್ದಮೆಯನ್ನು ನಡೆಸಿ ಗಲ್ಲು ಶಿಕ್ಷೆಯನ್ನು ವಿಧಿಸಿ, ಅದನ್ನು ತಕ್ಷಣವೇ ಜಾರಿಗೊಳಿಸುವುದು ಅವಶ್ಯಕವಾಗಿದೆ. ದೇಶದಲ್ಲಿರುವ ದೇಶದ್ರೋಹಿಗಳಿಗೆ ಹೀಗೆ ಮಾಡಿದರೆ ಮಾತ್ರ ಭಯ ಹುಟ್ಟುತ್ತದೆ ! |