ನಾವು ಇತರ ದೇಶಗಳಿಗಾಗಿ 30 ವರ್ಷಗಳ ಕಾಲ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದೇವೆ! – ಪಾಕಿಸ್ತಾನದ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಸ್ವೀಕೃತಿ

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ಕಳೆದ 30 ವರ್ಷಗಳಿಂದ ಭಯೋತ್ಪಾದಕರಿಗೆ ಬೆಂಬಲ ಮತ್ತು ತರಬೇತಿ ನೀಡುತ್ತಿದೆ. ಪಾಕಿಸ್ತಾನವು ಅಮೇರಿಕಾ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಈ ‘ಕೊಳಕು ಕೆಲಸ’ ವನ್ನು ಮಾಡುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಅವರು ಬ್ರಿಟಿಷ್ ಪತ್ರಿಕೆ ‘ದಿ ಸ್ಕೈ’ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಭಯೋತ್ಪಾದಕರಿಗೆ ಬೆಂಬಲ ನೀಡುವುದು ಅಥವಾ ತರಬೇತಿ ನೀಡುವುದು ದೊಡ್ಡ ತಪ್ಪು!

ಪತ್ರಕರ್ತ ಯಾಲ್ಡಾ ಹಕೀಮ್ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್

ಪತ್ರಕರ್ತ ಯಾಲ್ಡಾ ಹಕೀಮ್ ಅವರು ಆಸಿಫ್ ಅವರನ್ನು ‘ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳಿಗೆ ಪಾಕಿಸ್ತಾನ ಜವಾಬ್ದಾರಿಯೇ?’ ಎಂದು ಕೇಳಿದರು. ಅದಕ್ಕೆ ಅವರು, ಜಾಗತಿಕ ಶಕ್ತಿಗಳು ತಮ್ಮ ಹಿತಾಸಕ್ತಿಗಾಗಿ ಪಾಕಿಸ್ತಾನವನ್ನು ಬಳಸಿಕೊಂಡಿವೆ. ಭಯೋತ್ಪಾದಕರಿಗೆ ಬೆಂಬಲ ನೀಡುವುದು ಅಥವಾ ತರಬೇತಿ ನೀಡುವುದು ದೊಡ್ಡ ತಪ್ಪು. ನಾವು ಅದರ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. (ಪಾಕಿಸ್ತಾನ ಇನ್ನೂ ಯಾವುದೇ ಶಿಕ್ಷೆ ಅನುಭವಿಸಿಲ್ಲ, ಶಿಕ್ಷೆ ಇನ್ನೂ ಆಗಬೇಕಿದೆ! – ಸಂಪಾದಕರು) ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಭಾಗವಹಿಸದಿದ್ದರೆ ಮತ್ತು ಅಮೆರಿಕಾದಲ್ಲಿ 9/11 (ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ 2 ಕಟ್ಟಡಗಳ ಮೇಲೆ ದಾಳಿ) ದಾಳಿಯ ನಂತರ ಪರಿಸ್ಥಿತಿ ಉಂಟಾಗದಿದ್ದರೆ, ಪಾಕಿಸ್ತಾನದ ಪಾತ್ರವು ನಿರ್ಮಲವಾಗಿರುತ್ತಿತ್ತು.

ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಪರಿಣಾಮಗಳು ಅಪಾಯಕಾರಿಯಾಗುತ್ತವೆ!

ಪಹಲ್ಗಾಮ್ ದಾಳಿಯ ಬಗ್ಗೆ ಖ್ವಾಜಾ ಆಸಿಫ್, ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದವು ಎರಡೂ ದೇಶಗಳ ನಡುವಿನ ದೊಡ್ಡ ಯುದ್ಧದ ರೂಪವನ್ನು ಪಡೆಯಬಹುದು. ಭಾರತವು ಏನು ಮಾಡಿದರೂ, ಪಾಕಿಸ್ತಾನವು ಅದಕ್ಕೆ ಪ್ರತಿಕ್ರಿಯಿಸುತ್ತದೆ. ವಿಷಯಗಳು ತಪ್ಪಾದಲ್ಲಿ, ಈ ಸಂಘರ್ಷದ ಪರಿಣಾಮಗಳು ಅಪಾಯಕಾರಿಯಾಗಬಹುದು, ಎಂದು ಹೇಳಿದರು.

‘ಪಹಲ್ಗಾಮ್ ದಾಳಿಗೆ ಭಾರತವೇ ಕಾರಣವಂತೆ!’

ಆಸಿಫ್ ಅವರು ಪಹಲ್ಗಾಮ್ ದಾಳಿಗೆ ಪಾಕಿಸ್ತಾನವಲ್ಲ, ಭಾರತವೇ ಕಾರಣ ಎಂದು ಹೇಳಿದರು. ಭಾರತವು ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ, ಪಾಕಿಸ್ತಾನವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಪ್ರತಿಕ್ರಿಯಿಸುವುದನ್ನು ಹೊರತುಪಡಿಸಿ ಪಾಕಿಸ್ತಾನಕ್ಕೆ ಬೇರೆ ಆಯ್ಕೆಯಿಲ್ಲ. ಎರಡೂ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಜಗತ್ತು ಚಿಂತಿಸಬೇಕು. ಆದಾಗ್ಯೂ, ಎರಡೂ ದೇಶಗಳು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸುತ್ತವೆ.

‘ಲಷ್ಕರ್-ಎ-ತೊಯ್ಬಾ ಅಸ್ತಿತ್ವದಲ್ಲಿಲ್ವಂತೆ!’

ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ‘ದಿ ರೆಸಿಸ್ಟೆನ್ಸ್ ಫ್ರಂಟ್’ ತೆಗೆದುಕೊಂಡಿರುವ ಬಗ್ಗೆ ಕೇಳಿದಾಗ, ಆಸಿಫ್ ಅವರು ಅದರ ಹೆಸರನ್ನು ಸಹ ಕೇಳಿಲ್ಲ ಎಂದು ಹೇಳಿದರು. ಈ ಸಂಘಟನೆಯು ಲಷ್ಕರ್-ಎ-ತೊಯ್ಬಾದ ಭಾಗವಾಗಿದೆ ಎಂದು ಪತ್ರಕರ್ತರು ಅವರಿಗೆ ತಿಳಿಸಿದಾಗ, ಲಷ್ಕರ್-ಎ-ತೊಯ್ಬಾ ಸಂಘಟನೆ ಈಗ ವಯಸ್ಸಾಗಿದೆ ಅದು ಈಗ ಅಸ್ತಿತ್ವದಲ್ಲಿಲ್ಲ ಎಂದು ಆಸಿಫ್ ಹೇಳಿದರು.

ಸಂಪಾದಕೀಯ ನಿಲುವು

  • ಇದಕ್ಕಾಗಿಯೇ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಭಾರತದ ವಿರುದ್ಧ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾಗ, ಅದರ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ ಅಥವಾ ಶಿಕ್ಷಿಸಲು ಪ್ರಯತ್ನಿಸಲಿಲ್ಲ ಎಂಬುದು ಈಗ ಬಹಿರಂಗವಾಗಿದೆ!
  • ಈ ಒಪ್ಪಿಗೆಯ ನಂತರ, ಭಾರತವು ಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಿ ಅದರೊಂದಿಗೆ ವ್ಯವಹರಿಸಬೇಕು; ಏಕೆಂದರೆ ಪಾಶ್ಚಿಮಾತ್ಯ ದೇಶಗಳು ಪಾಕಿಸ್ತಾನವನ್ನು ವಿರೋಧಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ, ಆದ್ದರಿಂದ ಭಾರತವು ಈ ಹೋರಾಟವನ್ನು ತಾನೇ ಮಾಡಬೇಕಾಗುತ್ತದೆ!