ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ವಿದೇಶದ ಓರ್ವ ಸಾಧಕಿಗೆ ಸೂಕ್ಷ್ಮದಿಂದ ಕಾಣಿಸಿದ ಶ್ರೀ ತ್ರಿಪುರಾಸುಂದರಿದೇವಿಯ ರೂಪ ಮತ್ತು ಆಗ ಕಲಿಯಲು ಸಿಕ್ಕಿದ ಅಂಶಗಳು !

ಎತ್ತಿನ ಮೇಲೆ ಆರೂಢವಾಗಿರುವ ಶ್ರೀ ತ್ರಿಪುರಾಸುಂದರಿದೇವಿ

‘೨೦೨೩ ರ ನವರಾತ್ರಿಯ ಕಾಲಾವಧಿಯಲ್ಲಿ ಮಹರ್ಷಿಗಳ ಆಜ್ಞೆಯಂತೆ ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಶ್ರೀ ದಶ ಮಹಾವಿದ್ಯಾ (ದೇವಿಗೆ) ಸಂಬಂಧಿಸಿದ ಯಾಗವನ್ನು ಮಾಡಲಾಯಿತು. ಈ ಯಾಗದ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಉಪಸ್ಥಿತಿ ಲಭಿಸಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗ ತಡೆಯಬೇಕು, ಎಲ್ಲ ಸ್ತರಗಳಲ್ಲಿ ಸಾಧಕರ ರಕ್ಷಣೆಯಾಗಬೇಕು ಮತ್ತು ಈಶ್ವರೀ ರಾಜ್ಯದ ಸ್ಥಾಪನೆಯಲ್ಲಿನ ಎಲ್ಲ ಅಡತಡೆಗಳು ದೂರವಾಗಿ ಬೇಗನೆ ಈಶ್ವರೀ ರಾಜ್ಯದ ಸ್ಥಾಪನೆಯಾಗಬೇಕು, ಎಂದು ಮಹರ್ಷಿಗಳ ಆಜ್ಞೆಯಂತೆ ಈ ಯಾಗವನ್ನು ಮಾಡಲಾಯಿತು. ೧೭.೧೦.೨೦೨೩ ರಂದು ಶ್ರೀ ತ್ರಿಪುರಾಸುಂದರಿದೇವಿಯ ಯಜ್ಞವನ್ನು ಮಾಡಲಾಯಿತು. ಈ ಯಜ್ಞದ ಸಮಯದಲ್ಲಿ ನನಗೆ ಎತ್ತಿನ ಮೇಲೆ ಆರೂಢವಾಗಿರುವ ಶ್ರೀ ತ್ರಿಪುರಾಸುಂದರಿದೇವಿಯ ರೂಪ ಕಾಣಿಸಿತು. ದೇವಿಯು ಅತ್ಯಂತ ಸುಂದರವಾಗಿದ್ದಳು ಮತ್ತು ಅವಳಿಂದ ತುಂಬಾ ತೇಜಸ್ಸು ಪ್ರಕ್ಷೇಪಿಸುತ್ತಿತ್ತು. ನನಗೆ ತ್ರಿಪುರಾಸುಂದರಿದೇವಿಯ ರೂಪದ ಬಗ್ಗೆ ಅರಿವಾದ ವೈಶಿಷ್ಟ್ಯಗಳನ್ನು ಮುಂದೆ ಕೊಡಲಾಗಿದೆ.

೧. ಕಣ್ಣುಗಳು

ಶ್ರೀ ತ್ರಿಪುರಾಸುಂದರಿದೇವಿಯು ಧ್ಯಾನಾವಸ್ಥೆಯಲ್ಲಿರುವುದರಿಂದ ಅವಳ ಕಣ್ಣುಗಳು ಸ್ಥಿರ ಮತ್ತು ಶಾಂತವೆನಿಸುತ್ತಿತ್ತು. ದೇವಿಯು ಜಾಗೃತ ಧ್ಯಾನಾವಸ್ಥೆಯಲ್ಲಿದ್ದಳು.

೨. ಕಿರೀಟ

ಅ. ದೇವಿಯ ಕಿರೀಟದ ಮೇಲಿನ ನಕ್ಷಿಯು ಸುಂದರವಾಗಿತ್ತು. ಶ್ರೀಕೃಷ್ಣನ ಕಿರೀಟದಂತೆಯೇ ದೇವಿಯ ಕಿರೀಟವಿತ್ತು. ತ್ರಿಪುರಾಸುಂದರಿದೇವಿಯು ಉಚ್ಚ ದೇವತೆಯಾಗಿದ್ದಾಳೆ, ಹಾಗೆಯೇ ಅವಳು ಚೈತನ್ಯಕ್ಕೆ ಸಂಬಂಧಿಸಿದ ಮತ್ತು ನಿರ್ಗುಣ-ಸಗುಣ ಸ್ತರದÀ ದೇವತೆಯಾಗಿದ್ದಾಳೆ.
ಆ. ದೇವಿಯು ಚಂದ್ರನಾಡಿಗೆ ಸಂಬಂಧಿಸಿರುವುದರಿಂದ ಅವಳ ಕಿರೀಟದ ಮೇಲೆ ಚಂದ್ರನಿದ್ದನು.

೩. ಶಲ್ಯ

ದೇವಿಯು ದೈವೀ ಕಣಗಳಿರುವ ಹಳದಿ ಬಣ್ಣದ ಶಲ್ಯವನ್ನು ಹೊದ್ದುಕೊಂಡಿದ್ದಳು. ತ್ರಿಪುರಾಸುಂದರಿದೇವಿಯು ರಾಜಮನೆತನಕ್ಕೆ ಸಂಬಂಧಿಸಿದ್ದಾಳೆ. ಆದ್ದರಿಂದ ಅವಳು ಹಳದಿ ಬಣ್ಣದ ಶಲ್ಯವನ್ನು ಧರಿಸಿದ್ದಳು. (‘ತ್ರಿಪುರಾಸುಂದರಿದೇವಿಯನ್ನು ‘ರಾಜರಾಜೇಶ್ವರಿ’ ಎಂದೂ ಕರೆಯುತ್ತಾರೆ. ಆದ್ದರಿಂದ ಸಾಧಕಿಗೆ ದೇವಿಯು ಶಾಲು ಧರಿಸಿದ್ದು ಕಾಣಿಸಿತು.’ – ಸಂಕಲನಕಾರರು)

೪. ದೇವಿಯಿಂದ ತೇಜ ಮತ್ತು ಚೈತನ್ಯ ಪ್ರಕ್ಷೇಪಿಸುವುದು

ಅ. ಮೊದಲಿಗೆ ದೇವಿಯ ಸಂಪೂರ್ಣ ದೇಹದ ಸುತ್ತಲೂ ನಂತರ ಅವಳ ಮುಖದ ಸುತ್ತಲೂ ತೇಜ ನಿರ್ಮಾಣವಾಯಿತು.
ಆ. ದೇವಿಯ ಕಣ್ಣುಗಳಿಂದ ಪ್ರಕಾಶರೂಪಿ ತೇಜವು ಸಂಪೂರ್ಣ ವಾತಾವರಣದಲ್ಲಿ ಪ್ರವಾಹಿತವಾಯಿತು.
ಇ. ದೇವಿಯ ಆಶೀರ್ವಾದವನ್ನು ನೀಡುವ ಕೈಯಿಂದ ಚೈತನ್ಯ ಪ್ರವಹಿಸುತ್ತಿತ್ತು.

೫. ದೇವಿಯ ವಾಹನ

ಅ. ತ್ರಿಪುರಾಸುಂದರಿದೇವಿಯು ಬೂದು ಬಣ್ಣದ ಎತ್ತಿನ ಮೇಲೆ ಆರೂಢವಾಗಿದ್ದಳು.
ಆ. ಎತ್ತಿನಲ್ಲಿ ಶಿವತತ್ತ್ವ ಇತ್ತು. ದೇವಿಯಲ್ಲಿರುವ ನಿರ್ಗುಣ-ಸಗುಣ ತತ್ತ್ವದಿಂದ ಆ ಎತ್ತು ಧ್ಯಾನಾವಸ್ಥೆಯಲ್ಲಿತ್ತು.
ಇ. ಎತ್ತು ಕೊರಳಿನಲ್ಲಿ ಚಿನ್ನದ ಹಾರ ಮತ್ತು ಕಾಲಿನಲ್ಲಿ ಚಿನ್ನದ ಕಡಗ ಹಾಕಿತ್ತು. ಎತ್ತಿಗೆ ದೇವಿಯು ಉಡುಗೊರೆಯೆಂದು ಈ ಆಭರಣ ಕೊಟ್ಟಿದ್ದಳು. – ವಿದೇಶದ ಓರ್ವ ಸಾಧಕಿ

೬. ದೇವಿಯ ಸ್ಥಾನ

ದೇವಿಯ ಸ್ಥಾನವು ಒಂದು ಕಾಡಿನಲ್ಲಿತ್ತು. ಅಲ್ಲಿ ಹತ್ತಿರದಲ್ಲಿಯೇ ಒಂದು ದೇವಸ್ಥಾನ ಮತ್ತು ಕೆರೆಗಳಿದ್ದವು. ಕೆರೆಗಳಲ್ಲಿ ದೇವಿಯ ಶಕ್ತಿ ಪ್ರವಾಹಿತವಾಗುತ್ತಿತ್ತು.

೭. ಆಕಾಶದಲ್ಲಿನ ಚಂದ್ರ

ತ್ರಿಪುರಾಸುಂದರಿದೇವಿಯ ತತ್ತ್ವವು ಚಂದ್ರನಿಗೆ ಸಂಬಂಧಿಸಿ ರುವುದರಿಂದ ಆಕಾಶದಲ್ಲಿ ಚಂದ್ರನು ಕಾಣಿಸುತ್ತಿದ್ದನು.

೮. ಕಲಿಯಲು ಸಿಕ್ಕಿದ ಅಂಶಗಳು

೮ ಅ. ಸೂಕ್ಷ್ಮ-ಚಿತ್ರದಲ್ಲಿ ಕೇವಲ ಸಾತ್ತ್ವಿಕತೆ ಬರಲು ಪ್ರಯತ್ನಿಸದೇ ಅದರಲ್ಲಿ ಹೆಚ್ಚು ದೈವೀ ಶಕ್ತಿ (ಸ್ಪಂದನಗಳು) ಬರಲು ಪ್ರಯತ್ನಿಸುವುದು ಆವಶ್ಯಕ ! : ಸೂಕ್ಷ್ಮ ಪರೀಕ್ಷಣೆ ಯನ್ನು ಮಾಡುವಾಗ ನನಗೆ ತ್ರಿಪುರಾಸುಂದರಿದೇವಿಯ ಸುತ್ತಲೂ ಅನೇಕ ವೃಕ್ಷಗಳು ಕಂಡುಬಂದಿರುವುದರಿಂದ ಸೂಕ್ಷ್ಮ-ಚಿತ್ರದಲ್ಲಿಯೂ ನಾನು ದೇವಿಯ ಸುತ್ತಲೂ ವೃಕ್ಷಗಳನ್ನು ತೋರಿಸಿದ್ದೇನೆ; ಆದರೆ ವೃಕ್ಷಗಳಿಂದ ಚಿತ್ರದಲ್ಲಿನ ಸ್ಪಂದನಗಳು ಒಳ್ಳೆಯದೆನಿಸುತ್ತಿರಲಿಲ್ಲ. ಈ ಬಗ್ಗೆ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ತಿಳಿಸಿದೆನು, ಆಗ ಅವರು ನನಗೆ ‘ದೇವಿಯ ಸುತ್ತಲೂ ಮರಗಳಿರುವಾಗ ಮತ್ತು ಮರಗಳು ಇಲ್ಲದಿರುವಾಗ’, ಈ ರೀತಿ ಎರಡೂ ಸೂಕ್ಷ್ಮ-ಚಿತ್ರಗಳನ್ನು ಬಿಡಿಸಲು ಮತ್ತು ಅವುಗಳಲ್ಲಿನ ಸ್ಪಂದನಗಳ ಬಗ್ಗೆ ಅಧ್ಯಯನ ಮಾಡಲು ಹೇಳಿದರು. ಅದಕ್ಕನುಸಾರ ಎರಡೂ ಸೂಕ್ಷ್ಮ-ಚಿತ್ರಗಳ ಸ್ಪಂದನಗಳ ಅಧ್ಯಯನ ಮಾಡಿದ ನಂತರ ನನಗೆ ಮುಂದಿನ ಅಂಶಗಳು ಗಮನಕ್ಕೆ ಬಂದಿತು.

೧. ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ಮರಗಳನ್ನು ಬಿಡಿಸಿರು ವುದರಿಂದ ಆ ಚಿತ್ರವು ಹೆಚ್ಚು ಸ್ಥೂಲ ಸ್ತರದಲ್ಲಿತ್ತು, ಹಾಗೆಯೇ ‘ದೇವಿಯ ಚೈತನ್ಯದ ಪ್ರವಾಹಕ್ಕೆ ವೃಕ್ಷಗಳಿಂದ ಅಡಚಣೆ ಬರುತ್ತಿದೆ’, ಎಂದು ನನಗೆ ಅರಿವಾಯಿತು. ಆಗ ನಾನು ಚಿತ್ರದಲ್ಲಿನ ಮರಗಳನ್ನು ಅಳಿಸಿದಾಗ ದೇವಿಯು ಹೆಚ್ಚು ವ್ಯಾಪಕವಾಗಿ ಕಾಣಿಸತೊಡಗಿದಳು, ಹಾಗೆಯೇ ಚಿತ್ರದಲ್ಲಿ ಹೆಚ್ಚಾಗಿ ದೇವಿವ್ತ್ತ್ವ್ವದ ಅರಿವಾಗತೊಡಗಿತು.

೨. ‘ಸೂಕ್ಷ್ಮ-ಚಿತ್ರಗಳಲ್ಲಿ ಕೇವಲ ಸಾತ್ತ್ವಿಕತೆ ಬರಲು ಪ್ರಯತ್ನಿಸುವುದರ ಜೊತೆಗೆ ಅದರಲ್ಲಿ ಹೆಚ್ಚು ದೈವೀ ಶಕ್ತಿ (ಸ್ಪಂದನಗಳು) ಬರಲು ಪ್ರಯತ್ನಿಸುವುದು ಆವಶ್ಯಕವಾಗಿದೆ’, ಎಂದು ನನಗೆ ಕಲಿಯಲು ಸಿಕ್ಕಿತು.

೮ ಆ. ವ್ಯಷ್ಟಿ ಸಾಧನೆ ಒಳ್ಳೆಯದಾದರೆ ಮನಸ್ಸು ಸ್ಥಿರ ಮತ್ತು ಸಕಾರಾತ್ಮಕವಾಗಿರುವುದು, ಹಾಗೆಯೇ ಸೇವೆ ಮಾಡಲು ಶಕ್ತಿ ದೊರಕುವುದು : ನನ್ನಿಂದಾದ ಒಂದು ತಪ್ಪಿನಿಂದ ನನ್ನ ಮನಸ್ಸು ನಕಾರಾತ್ಮಕ ಸ್ಥಿತಿಯಲ್ಲಿತ್ತು. ಅದೇ ಸ್ಥಿತಿಯಲ್ಲಿ ನಾನು ಸೇವೆ ಮಾಡಲು ಪ್ರಯತ್ನಿಸುತ್ತಿದ್ದೆನು; ಆದರೆ ನನಗೆ ಸೂಕ್ಷ್ಮ ಪರೀಕ್ಷಣೆ ಮಾಡಲು, ಹಾಗೆಯೇ ಸೂಕ್ಷ್ಮ-ಚಿತ್ರವನ್ನು ಬಿಡಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ನನ್ನಿಂದಾದ ತಪ್ಪಿನ ಚಿಂತನೆ ಮಾಡಿ ‘ಆ ತಪ್ಪಿನಿಂದ ನನಗೆ ಏನು ಕಲಿಯಲು ಸಿಕ್ಕಿತು ?’, ಎಂಬುದನ್ನು ಬರೆದೆನು. ಆಗ ನನ್ನ ಮನಸ್ಸು ಸಕಾರಾತ್ಮಕವಾಯಿತು. ಅನಂತರ ನನಗೆ ಸೂಕ್ಷ್ಮ ಪರೀಕ್ಷಣೆ ಮಾಡಲು ಸಾಧ್ಯವಾಯಿತು, ಹಾಗೆಯೇ ಸೂಕ್ಷ್ಮ-ಚಿತ್ರವನ್ನೂ ಬಿಡಿಸಲು ಸಾಧ್ಯವಾಯಿತು. ‘ನನ್ನ ವ್ಯಷ್ಟಿ ಸಾಧನೆ ಒಳ್ಳೆಯದಾದರೆ ಮಾತ್ರ ನನ್ನ ಮನಸ್ಸು ಸ್ಥಿರ ಮತ್ತು ವಿಚಾರರಹಿತ ಇರುವುದು ಹಾಗೂ ದೇವರು ನನಗೆ ಸೇವೆ ಮಾಡಲು ವಿಚಾರ ಮತ್ತು ಶಕ್ತಿಯನ್ನು ನೀಡುವನು’, ಇದು ನನಗೆ ಕಲಿಯಲು ಸಿಕ್ಕಿತು.

೯. ಅನುಭೂತಿ

ಅ. ದೇವಿಯ ಕಾಲುಗಳಲ್ಲಿನ ಗೆಜ್ಜೆಗಳ ನಕ್ಷಿಯನ್ನು ಬಿಡಿಸು ವಾಗ ‘ನಾನು ದೇವಿಯ ಚರಣಗಳನ್ನು ಸ್ಪರ್ಶಿಸುತ್ತಿದ್ದೇನೆ’, ಎಂದು ನನಗೆ ಅರಿವಾಗುತ್ತಿತ್ತು. ದೇವಿಯ ಚರಣಗಳು ಅತ್ಯಂತ ಕೋಮಲವಾಗಿದ್ದವು.
ಆ. ನನಗೆ ‘ದೇವಿಯು ನನ್ನ ಮುಂದೆ ನಿಂತಿದ್ದಾಳೆ’, ಎಂದು ತೀವ್ರವಾಗಿ ಅನಿಸುತ್ತಿತ್ತು. ಸೂಕ್ಷ್ಮದಿಂದ ನಾನು ಅವಳ ರೂಪವನ್ನು ಎಷ್ಟು ಬಾರಿ ನೋಡುತ್ತಿದ್ದೆನೋ, ಅಷ್ಟು ಅವಳ ರೂಪವು ಚಿತ್ರದಲ್ಲಿ ಪ್ರಕಟವಾಗುತ್ತಿತ್ತು. ಆದ್ದರಿಂದ ‘ಸೂಕ್ಷ್ಮ- ಚಿತ್ರವನ್ನು ಹೆಚ್ಚು ಪರಿಪೂರ್ಣವಾಗಿ ಹೇಗೆ ಬಿಡಿಸಬಹುದು ?’, ಎಂಬುದರ ಬಗ್ಗೆ ನನಗೆ ಹೆಚ್ಚು ಕಲ್ಪನೆಗಳು ಹೊಳೆಯುತ್ತಿದ್ದವು.
ಇ. ನನಗೆ ‘ದೇವಿಯೇ ನನಗೆ ಶಕ್ತಿಯನ್ನು ನೀಡಿ ನನ್ನಿಂದ ಚಿತ್ರವನ್ನು ಚಿತ್ರಿಸಿಕೊಳ್ಳುತ್ತಿದ್ದಾಳೆ’, ಎಂಬ ಅರಿವಾಗುತ್ತಿತ್ತು.
ಈ. ಯಾವಾಗ ನಾನು ದೇವಿಯನ್ನು ಸೂಕ್ಷ್ಮದಿಂದ ಅನುಭವಿಸುವ ಮತ್ತು ಅವಳ ಅನುಸಂಧಾನದಲ್ಲಿರಲು ಪ್ರಯತ್ನಿಸುತ್ತಿದ್ದೆನೋ, ಆಗ ನನ್ನ ಸೇವೆಯು ಸಹಜ ಮತ್ತು ಶೀಘ್ರಗತಿಯಿಂದಾಗುತ್ತಿತ್ತು. ಬದಲಾಗಿ ನಾನು ಯಾವಾಗ ಸೇವೆಯನ್ನು ಕೇವಲ ಪೂರ್ಣ ಮಾಡುವುದರ ಕಡೆಗೆ ಗಮನ ಕೊಡುತ್ತಿದ್ದೆನೋ, ಆಗ ಸೇವೆಯ ವೇಗ ಕಡಿಮೆ ಆಗುತ್ತಿತ್ತು.
ಉ. ದೇವಿಯ ಚಿತ್ರವನ್ನು ಬಿಡಿಸುವಾಗ ಮಧ್ಯ ಮಧ್ಯದಲ್ಲಿ ನನಗೆ ಅಸ್ಥಿರವೆನಿಸುತ್ತಿತ್ತು. ಆಗ ನಾನು ದೇವಿಗೆ ಶರಣಾಗುತ್ತಿದ್ದೆನು ಮತ್ತು ‘ನನಗೆ ಸ್ಥಿರ ಮತ್ತು ಶಾಂತವಾಗಿರಲು ಸಾಧ್ಯವಾಗಲಿ’, ಎಂದು ಪ್ರಾರ್ಥಿಸುತ್ತಿದ್ದೆನು.
ಊ. ದೇವಿಯ ರೂಪವು ಅತ್ಯಂತ ಸುಂದರವಾಗಿತ್ತು. ನಾನು ಅವಳ ಚೈತನ್ಯವನ್ನು ಅನುಭವಿಸುತ್ತಿದ್ದೆನು.
ಎ. ನನಗೆ ‘ದೇವಿಯು ನನ್ನ ತಲೆಯ ಮೇಲೆ ಕೈ ಇಟ್ಟು ನನಗೆ ಆಶೀರ್ವಾದ ಮಾಡುತ್ತಿದ್ದಾಳೆ’, ಎಂಬ ಅರಿವಾಗುತ್ತಿತ್ತು.
‘ಹೇ ತ್ರಿಪುರಾಸುಂದರಿದೇವಿ, ನೀನು ನನಗೆ ದಿವ್ಯ ದರ್ಶನವನ್ನು ನೀಡಿರುವೆ, ಅದಕ್ಕಾಗಿ ನಾನು ನಿನ್ನ ಚರಣಗಳಲ್ಲಿ ಕೃತಜ್ಞಳಾಗಿದ್ದೇನೆ. ನಿನ್ನ ದಿವ್ಯ ದರ್ಶನವೆಂದರೆ ನಮ್ಮೆಲ್ಲ ಸಾಧಕರ ಮೇಲೆ ನಿನ್ನ ಕೃಪೆಯೇ ಆಗಿದೆ. ‘ನಮ್ಮ ಸಾಧನೆಯ ಪ್ರಯತ್ನಗಳು ದಿನದಿಂದ ದಿನಕ್ಕೆ ಹೆಚ್ಚಾಗಲಿ ಮತ್ತು ನಮಗೆ ನಿನ್ನ ಅನುಸಂಧಾನದಲ್ಲಿರಲು ಸಾಧ್ಯವಾಗಲಿ. ನಿನ್ನ ದಿವ್ಯ ರೂಪದ ಅನುಭೂತಿ ಪಡೆಯಲು ಸಾಧ್ಯವಾಗಲಿ’, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆಯಾಗಿದೆ.’

– ವಿದೇಶದ ಓರ್ವ ಸಾಧಕಿ (ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೨೬ ವರ್ಷ), (೬.೧೨.೨೦೨೩)