೧. ಜೀವದಲ್ಲಿರುವ ಈಶ್ವರನ ಒಂದೊಂದು ಗುಣವೆಂದರೆ, ಈಶ್ವರನು ನೀಡಿದ ಒಂದೊಂದು ಸೂಕ್ಷ್ಮ ಆಭರಣವೇ ಆಗಿರುತ್ತದೆ : ಜೀವದಲ್ಲಿರುವ ಈಶ್ವರನ ಬೇರೆಬೇರೆ ಗುಣಗಳಿಗನುಸಾರ ಬೇರೆಬೇರೆ ಆಭರಣಗಳಿರುತ್ತವೆ ಮತ್ತು ಅವು ಈಶ್ವರನ ಗುಣಗಳಿಗನುಸಾರ ಆಯಾ ಆಕಾರವನ್ನು ತಾಳುತ್ತವೆ. ಅಲ್ಲದೇ ಜೀವಕ್ಕೆ ಆವಶ್ಯಕವಿರುವ ತತ್ತ್ವಕ್ಕನುಸಾರ ಅವುಗಳಲ್ಲಿ ಬಣ್ಣವನ್ನು ತುಂಬಿಸಲಾಗಿರುತ್ತದೆ.
೨. ದೈವೀ ಆಭರಣಗಳ ಸ್ಥಾನಗಳು ಶರೀರದಲ್ಲಿನ ಬೇರೆಬೇರೆ ಚಕ್ರಗಳ ಮೇಲಿರುತ್ತವೆ. ಅವು ಒಂದು ರೀತಿಯಲ್ಲಿ ಈಶ್ವರನು ಜೀವಕ್ಕೆ ನೀಡಿದ ಸಂರಕ್ಷಣೆಯ ಕವಚವೇ ಆಗಿರುತ್ತವೆ.
೩. ಸೂಕ್ಷ್ಮದಲ್ಲಿರುವ ಆಭರಣಗಳಿಂದ ಶರೀರದಲ್ಲಿನ ಚಕ್ರಗಳಿಗೆ ಸತತವಾಗಿ ಶಕ್ತಿಯು ಸಿಗುತ್ತಿರುತ್ತದೆ. ವಿಶ್ವವನ್ನು ಸ್ಥಿರಗೊಳಿಸುವ ಶಿವಧ್ಯಾನವೆಂದರೆ ಶಿವನ ಆಭರಣ ! : ಬ್ರಹ್ಮಾಂಡದ ನಿರ್ಮಾಣವು ನಿರ್ಗುಣದಿಂದ ಸಗುಣ ಎಂಬ ಪದ್ಧತಿಯಿಂದಾಗಿದೆ. ಶಿವನ ಧ್ಯಾನವು ಈ ಬ್ರಹ್ಮಾಂಡದ ಕೇಂದ್ರಬಿಂದುವಾಗಿದೆ ಮತ್ತು ಅದರಿಂದ ಅಖಿಲ ಬ್ರಹ್ಮಾಂಡದ ಕಾರ್ಯವು ನಡೆಯುತ್ತ್ತಿದೆ. ಈ ಸಗುಣಕ್ಕೆ, ಅಂದರೆ ವಿಶ್ವವನ್ನು ಸ್ಥಿರಗೊಳಿಸುವ ಈ ನಿರ್ಗುಣಕ್ಕೆ, ಅಂದರೆ ಶಿವಧ್ಯಾನಕ್ಕೆ ಶಿವನ ಆಭರಣವೆಂದು ಹೇಳಬಹುದು.