ಧರ್ಮಶಿಕ್ಷಣ ಮತ್ತು ಕ್ಷಾತ್ರತೇಜ ಇವೆರಡೂ ಸಮಾನವಾಗಿ ಆವಶ್ಯಕ !

ವೈದ್ಯ ಪರೀಕ್ಷಿತ ಶೇವಡೆ

ಸದ್ಯ ಹಿಂದೂಗಳಲ್ಲಿ ಧಾರ್ಮಿಕ ಹಿಂದೂ ಮತ್ತು ರಾಜಕೀಯ ಹಿಂದೂ ಹೀಗೆ ವಿಭಜನೆಯಾಗಿರುವುದು ಕಂಡುಬರುತ್ತದೆ. ಇದರಲ್ಲಿನ ‘ಧಾರ್ಮಿಕ ಹಿಂದೂಗಳು ಧರ್ಮರಕ್ಷಣೆಗಾಗಿ ಹೇಗೆ ನಿರುಪಯುಕ್ತರಾಗಿದ್ದಾರೆ’, ಎನ್ನುವ ಒಂದು ‘ನೆರೇಟಿವ್’ (ಸುಳ್ಳು ಕಥೆಗಳನ್ನು ಹೆಣೆಯುವುದು) ಕಾಣಿಸುತ್ತದೆ. ‘Those who play the book in masses; win ’ (ಯಾರು ದೊಡ್ಡ ಪ್ರಮಾಣದಲ್ಲಿ ನಿಯಮಕ್ಕನುಸಾರ ಆಡುತ್ತಾರೆಯೋ ಅವರು ಗೆಲ್ಲುತ್ತಾರೆ) ಇದನ್ನು ಶಾಶ್ವತವಾಗಿ ಗಮನದಲ್ಲಿಡಿ. ನನ್ನ ಪಂಥವಿಶೇಷದ ಅನೇಕ ರೋಗಿಗಳು ತಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದ್ದರೂ ಕಟ್ಟರತೆಯಿಂದ ತಿಂಗಳಿಡೀ ದಿನವಿಡೀ ಉಪವಾಸ ಮಾಡುತ್ತಾರೆ. ಇದು ಯೋಗ್ಯವೇ ಅಯೋಗ್ಯವೇ ? ಇದರಲ್ಲಿ ಸಿಲುಕದೇ, ಇದರ ಹಿಂದಿನ ಮೂಲಭೂತವಾದನ್ನು ತಿಳಿದುಕೊಳ್ಳಿರಿ. ಈ ಮೂಲಭೂತವಾದದಿಂದಲೇ ರಸ್ತೆಯ ಮೇಲಿನ ಜನರ ಗುಂಪುಗಳು ಗೆಲ್ಲುತ್ತವೆ. ಈ ಮಾನಸಿಕತೆ ಅವರ ಪಂಥದ ಶಿಕ್ಷಣ ಅಥವಾ ಅದರ ಪಾಲನೆ ಮಾಡದೆ ಆಗುತ್ತದೆಯೆ ? ಇನ್ನೊಂದೆಡೆ ಧರ್ಮಶಿಕ್ಷಣ ಹಾಗೂ ಇತಿಹಾಸ ಇವೆರಡರ ಜ್ಞಾನ, ಅರಿವು ಇಲ್ಲದ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಹಿಂದೂ ಸಮಾಜ ಮಾತ್ರ ಧಾರ್ಮಿಕ ಅಥವಾ ರಾಜಕೀಯ ಈ ವಿವಾದದಲ್ಲಿ ಸಿಲುಕುತ್ತಿದೆ.

೧. ಹಿಂದೂ ಎಂದು ಅಸ್ತಿತ್ವವನ್ನು ಕಾಪಾಡಲು ಮೂಲಭೂತ ಧಾರ್ಮಿಕ ಶಿಕ್ಷಣ ಆವಶ್ಯಕ !

ಆದಿ ಶಂಕರಾಚಾರ್ಯರಿಂದ ಛತ್ರಪತಿ ಶಿವಾಜಿ ಮಹಾರಾಜರ ವರೆಗೆ ಯಾರೆಲ್ಲ ಧರ್ಮರಕ್ಷಣೆ ಮಾಡಿದರೊ, ಅವರೆಲ್ಲರೂ ಸ್ವತಃ ಅತ್ಯಂತ ಧಾರ್ಮಿಕ ಹಿಂದೂಗಳಾಗಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಸಿಗಬಹುದು. ‘ಜನಸಂಗ್ರಹ ಮಾಡುವವರಲ್ಲಿ (ಲೀಡರಗಳಲ್ಲಿ) ಯಾವ ಲಕ್ಷಣಗಳಿರಬೇಕು ?’, ಎಂಬುದನ್ನು ಸಮರ್ಥ ರಾಮದಾಸಸ್ವಾಮಿಗಳು ಹೇಳುತ್ತಾರೆ, ‘ಅವನಿಗೆ ಒಳ್ಳೆಯ ರೀತಿಯಲ್ಲಿ ಹರಿಕಥೆ (ಕೀರ್ತನೆ) ಮತ್ತು ಅಧ್ಯಾತ್ಮ ನಿರೂಪಣೆ ಮಾಡಲು ಬರಬೇಕು. ಎರಡನೇಯದೆಂದರೆ ಅವನಲ್ಲಿ ದೂರದೃಷ್ಟಿ ಇರಬೇಕು ಹಾಗೂ ಮೂರನೆಯದೆಂದರೆ ಅವನಲ್ಲಿ ಎಲ್ಲ ವಿಷಯಗಳಲ್ಲಿ ಜಾಗರೂಕತೆ ಇರಬೇಕು.
ಸಮರ್ಥರ ಧರ್ಮರಕ್ಷಣೆಯ ನಿಲುವು ರಾಜಕೀಯ ಹಿಂದುತ್ವ ವನ್ನು ಬೆಂಬಲಿಸುವವರಿಗೂ ಒಪ್ಪಿಗೆಯಾಗಬಹುದು, ಹೀಗೆ ಸಾಧಾರಣ ಅಪೇಕ್ಷೆಯಿದೆ !  ಮೂಲದಲ್ಲಿ ರಾಜಕೀಯ ಹಿಂದೂಗಳಲ್ಲಿನ ‘ರಾಜಕೀಯ’ ಈ ಶಬ್ದ ಮಾತ್ರ ಬಾಕಿ ಇರಬೇಕೆಂದು ಕೆಲವರ ಪ್ರಯತ್ನ ನಡೆಯುತ್ತಿದೆಯೇ ? ಇಷ್ಟರ ವರೆಗೆ ಅವರ ಅಭಿಪ್ರಾಯಗಳಿರುತ್ತವೆ. ಏಕೆಂದರೆ ಹಿಂದೂಗಳೆಂದು ನಿಮ್ಮ ಅಸ್ತಿತ್ವ ಉಳಿಯಲು ಬೇಕಾಗುವ ಮೂಲಭೂತ ಧಾರ್ಮಿಕ ಶಿಕ್ಷಣದ ಅವಶ್ಯಕತೆಯಿದೆ, ಅದೇ ಇಲ್ಲದಿದ್ದರೆ ನೀವು ಇಂದಲ್ಲ ನಾಳೆ ನಿಮ್ಮ ಪರಿಚಯವನ್ನು ಕಳೆದುಕೊಳ್ಳುವುದು ಖಚಿತ.

೨. ರಾಜಕೀಯ ಹಾಗೂ ಧಾರ್ಮಿಕ ಇವೆರಡೂ ಮಹತ್ವದ್ದಾಗಿವೆ !

ಹಾಗಾದರೆ ಏನು ಮಾಡಬೇಕು ? ನನಗೆ ಈ ವಿಷಯದಲ್ಲಿ ಸಿಕ್ಖರ ‘ಮೀರಿ-ಪೀರಿ’ ಎಂಬ ಸಂಕಲ್ಪನೆಯನ್ನು ಆಚರಿಸುವುದು ಯೋಗ್ಯವೆನಿಸುತ್ತದೆ. ಗುರು ಹರಗೋವಿಂದಸಿಂಗ ಮಹಾರಾಜರು ಎರಡು ಖಡ್ಗಗಳನ್ನು ಜೊತೆಗಿಟ್ಟುಕೊಳ್ಳುವ ರೂಢಿಯನ್ನು ಆರಂಭಿಸಿದರು. ಇದರಲ್ಲಿನ ಒಂದು ‘ಮೀರಿ’, ಅಂದರೆ ರಾಜ್ಯಾಧಿಕಾರದ ವರ್ಚಸ್ಸಿನ ಸಂಕೇತ, ‘ಪೀರಿ’ ಇದು ಧರ್ಮಾಧಿಕಾರದ ವರ್ಚಸ್ಸಿನ ಸಂಕೇತವಾಗಿದೆ. ಧಾರ್ಮಿಕ ಹಿಂದೂಗಳನ್ನು ಕೆಳಮಟ್ಟದವರೆಂದು ಹೇಳಲು ಸಾಧ್ಯವಿಲ್ಲ; ತದ್ವಿರುದ್ಧ ಅದೇ ಅಡಿಪಾಯವಾಗಿದೆ.

೩. ಧಮಶಿಕ್ಷಣ ಮತ್ತು ಕ್ಷಾತ್ರತೇಜ ಇವೆರಡೂ ವಿಷಯಗಳು ಸಮಾನವಾಗಿರಬೇಕು !

ಈಗ ಅವಶ್ಯಕತೆ ಇರುವುದು ಜಾಗರೂಕತೆ ಹಾಗೂ ಕೃತಿಶೀಲತೆ. ನಿಜವಾಗಿಯೂ ರಸ್ತೆಗಿಳಿಯುವ ಪ್ರಸಂಗ ಬಂದರೆ ಯಾರಾದರೂ ನಮ್ಮನ್ನು ರಕ್ಷಿಸುವರೆಂಬ ತಪ್ಪು ಕಲ್ಪನೆಯಿಂದ ಹೊರಗೆ ಬರಬೇಕಾಗುತ್ತದೆ. ಇದಕ್ಕೂ ಮತ್ತೊಮ್ಮೆ ಸಮರ್ಥರೇ ಆದರ್ಶರಾಗಿದ್ದಾರೆ. ರಾಮನ ದಾಸರು ಯಾರ ಮಂದಿರಗಳನ್ನು ನಿರ್ಮಿಸುತ್ತಾರೆ ? ರಾಮನದಲ್ಲವೇ ? ಛೇ, ಅಲ್ಲ ಹನುಮಂತನದ್ದು ! ಕೇವಲ ಮಂದಿರಗಳಲ್ಲ, ಅದರ ಜೊತೆಗೆ ಬಲೋಪಾಸನೆಯ ಆಗ್ರಹವೂ ಇರಬೇಕು. ಸಮರ್ಥ ರಾಮದಾಸ ಸ್ವಾಮಿಗಳು ಹೇಳುತ್ತಾರೆ ಶತ್ರುವಿನ ಸೈನ್ಯವನ್ನು ನೋಡಿದ ಕೂಡಲೇ ಯಾರ ಬಾಹುಗಳು ಹೋರಾಡಲು ಸಜ್ಜಾಗುತ್ತವೆ ಅಂತಹ ಪರಾಕ್ರಮಿ ರಾಜನಿರಬೇಕು. ಅವನು ಶಾಶ್ವತವಾಗಿ ಪ್ರಜೆಗಳ ಹಿತ ಕಾಪಾಡಬೇಕು.’

ಧರ್ಮಶಿಕ್ಷಣ ಮತ್ತು ಕ್ಷಾತ್ರತೇಜ

ಆದುದರಿಂದಲೇ ಧರ್ಮಶಿಕ್ಷಣ ಮತ್ತು ಕ್ಷಾತ್ರತೇಜ ಇವೆರಡೂ ವಿಷಯಗಳು ಸಮಾನವಾಗಿರಬೇಕು. ಕೇವಲ ರಾಜಕೀಯ ಹಿಂದೂಗಳು ಸ್ವಲ್ಪ ಧಾರ್ಮಿಕತೆ ಮತ್ತು ಕೇವಲ ಧಾರ್ಮಿಕ ಹಿಂದೂಗಳು ಸ್ವಲ್ಪ ರಾಜಕೀಯತೆಯನ್ನು ಅಂಗೀಕರಿಸುವ ಅವಶ್ಯಕತೆಯಿದೆ. ಸಮರ್ಥ ರಾಮದಾಸ ಸ್ವಾಮಿಯವರು ಹೇಳುತ್ತಾರೆ, ಪ್ರತಿ ಯೊಬ್ಬರಲ್ಲಿಯೂ ದೊಡ್ಡ ಚಳುವಳಿಗಳನ್ನು ಮಾಡುವ ಸಾಮರ್ಥ್ಯವಿರುತ್ತದೆ. ಕೆಲವರು ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಾರೆ; ಆದರೆ ಆ ಪ್ರಯತ್ನ ಯಶಸ್ವಿಯಾಗಲು ಆ ಪ್ರಯತ್ನಗಳಿಗೆ ಭಗವಂತನ ಅಧಿಷ್ಠಾನವಿರಬೇಕು

– ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಿಲಿ. (೨೪.೩.೨೦೨೫)