ಕಟ್ಟರವಾದಿ ಸಿದ್ಧಾಂತಗಳತ್ತ ವಾಲಿದ್ದ 8 ಸಾವಿರಕ್ಕೂ ಹೆಚ್ಚು ಜನರನ್ನು ಸನಾತನ ಧರ್ಮಕ್ಕೆ ಮರಳಿ ತಂದ ಕೇರಳದ ಆಚಾರ್ಯಶ್ರೀ ಕೆ.ಆರ್. ಮನೋಜ!

ಆಚಾರ್ಯಶ್ರೀ ಕೆ.ಆರ್. ಮನೋಜ ಅವರು 1990 ರಲ್ಲಿ ಸದ್ಗುರು ಶ್ರೀ ಶಂಕರ ಗುರುದೇವ ಅವರ ಆಶೀರ್ವಾದದಿಂದ ‘ಆರ್ಷ ವಿದ್ಯಾ ಸಮಾಜಂ’ ಅನ್ನು ಸ್ಥಾಪಿಸಿದರು. ‘ಆರ್ಷ ವಿದ್ಯಾ ಸಮಾಜಂ’ ಇದು ಕೇರಳದ ತಿರುವನಂತಪುರಂನಲ್ಲಿರುವ ಒಂದು ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದ್ದು, ಇಲ್ಲಿ ಸನಾತನ ಧರ್ಮದ ‘ಅಧ್ಯಯನ (ಕ್ರಮಬದ್ಧ ಅಧ್ಯಯನ), ಅನುಷ್ಠಾನ (ಅಭ್ಯಾಸ), ಪ್ರಚಾರ (ಪ್ರೋತ್ಸಾಹ), ಅಧ್ಯಾಪನ (ಕಲಿಸುವುದು), ಸಂರಕ್ಷಣೆ’ ಎಂಬ ಪಂಚಕರ್ತವ್ಯಗಳನ್ನು ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ಪೂರೈಸಲು ಪ್ರಯತ್ನಿಸುತ್ತಿದೆ. ‘ಕೃಣ್ವಂತೋ ವಿಶ್ವಮಾರ್‍ಯಮ್ |’ ಅರ್ಥ: ‘ಸನಾತನ ಧರ್ಮದ ಮೂಲಕ ಇಡೀ ಜಗತ್ತನ್ನು ಶ್ರೇಷ್ಠವನ್ನಾಗಿಸಿರಿ’ ಎಂಬ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಆಚಾರ್ಯಶ್ರೀ ಕೆ.ಆರ್. ಮನೋಜ!


ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

ಸಂಸ್ಥಾಪಕರು ಮತ್ತು ಮಾರ್ಗದರ್ಶಕರು

ಆರ್ಷ ವಿದ್ಯಾ ಸಮಾಜಂ, ಶಿವಶಕ್ತಿ ಯೋಗವಿದ್ಯಾ ಕೇಂದ್ರಂ, ಮನೀಷಾ ಸಾಂಸ್ಕಾರಿಕ ವೇದಿ, ವಿಜ್ಞಾನಭಾರತಿ ವಿದ್ಯಾಕೇಂದ್ರಂ, ವಿಜ್ಞಾನಭಾರತಿ ಎಜುಕೇಷನಲ್ ಅಂಡ್ ಚಾರಿಟೇಬಲ್ ಸೊಸೈಟಿ, ವಿಜ್ಞಾನಭಾರತಿ ಚಾರಿಟೇಬಲ್ ಟ್ರಸ್ಟ್, ಆರ್ಷ ವಿದ್ಯಾ ಸಮಾಜಂ ಚಾರಿಟೇಬಲ್ ಟ್ರಸ್ಟ್, ವಿಶ್ವಭಾರತಿ ಚಾರಿಟೇಬಲ್ ಟ್ರಸ್ಟ್, ವಿಜ್ಞಾನಭಾರತಿ ಲರ್ನಿಂಗ್ ಸೆಂಟರ್ಸ್, ಬೌದ್ಧಿಕಂ ಬುಕ್ಸ್ ಅಂಡ್ ಪಬ್ಲಿಕೇಷನ್ಸ್, ಆರ್ಷ ಗ್ಲೋಬಲ್ ಮಿಷನ್ ಪ್ರೈ. ಲಿ., ಸಾಧನಾ ಶಕ್ತಿ ಕೇಂದ್ರಂ, ವಿಜ್ಞಾನಭಾರತಿ ಮಾಸಿಕ

ಆಧ್ಯಾತ್ಮಿಕ ಹಿನ್ನೆಲೆ

ಚಿಕ್ಕ ವಯಸ್ಸಿನಲ್ಲೇ ಆಚಾರ್ಯಶ್ರೀ ಕೆ.ಆರ್. ಮನೋಜ ಅವರಿಗೆ ಅವರ ಗುರು ಶ್ರೀ ಶಂಕರ ಗುರುದೇವ, ಅತ್ರೇಯ ಪರಂಪರೆಯ ಮಹಾ ಕ್ರಿಯಾ ಯೋಗ ಮಾರ್ಗದ ಅವಧೂತ ಮಹಾಸಿದ್ಧರಿಂದ ಆಧ್ಯಾತ್ಮಿಕ ಮಾರ್ಗದ ದೀಕ್ಷೆ ದೊರೆಯಿತು. ಆಚಾರ್ಯಶ್ರೀ ಅವರು ಗುರುಗಳ ನಿರಂತರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಉಳಿದರು. ಗುರುಗಳೇ ಅವರಿಗೆ ಐತಿಹಾಸಿಕ ಕ್ರಾಂತಿಯನ್ನು ಮಾಡುವ ಗುರಿಯನ್ನು ನೀಡಿದರು. ಗುರುಗಳ ಮಾರ್ಗದರ್ಶನದಲ್ಲಿ ಆಚಾರ್ಯಶ್ರೀ ಕೆ.ಆರ್. ಮನೋಜ ಅವರು ಎಲ್ಲಾ ಪ್ರಮುಖ ಆರ್ಷ ಗುರು ಪರಂಪರೆ ಮತ್ತು ಪದ್ಧತಿಗಳ ಬೋಧನೆಗಳನ್ನು ಕರಗತ ಮಾಡಿಕೊಂಡರು.

ಆಚಾರ್ಯಶ್ರೀ ಅವರು ಮಹರ್ಷಿ ಅಗಸ್ತ್ಯರಿಂದ ಪ್ರಾರಂಭವಾದ ಪರಂಪರೆಯಿಂದ ಕ್ರಿಯಾಯೋಗದ ಅಭ್ಯಾಸವನ್ನೂ ಮಾಡಿದರು. ಈ ಪರಂಪರೆಯು ಮಹಾವತಾರ ಬಾಬಾಜಿ, ಶ್ರೀ ಲಾಹಿರಿ ಮಹಾಶಯ, ಶ್ರೀ ಯುಕ್ತೇಶ್ವರ ಗಿರಿ ಮಹಾರಾಜ ಮತ್ತು ಶ್ರೀ ಪರಮಹಂಸ ಯೋಗಾನಂದರಂತಹ ಗುರುಗಳ ಪರಂಪರೆಯೂ ಆಗಿದೆ. ಹಿಮಾಲಯದ ಸಿದ್ಧಾಶ್ರಮ ಪರಂಪರೆಯ ಶ್ರೀ ಸಚ್ಚಿದಾನಂದ ಪರಮಹಂಸರು ಆಯ್ಕೆ ಮಾಡಿದ ಶ್ರೀ ನಿಖಿಲೇಶ್ವರಾನಂದ ಪರಮಹಂಸರಿಂದ ಆಚಾರ್ಯಶ್ರೀ ಮನೋಜ ಅವರಿಗೆ ಶಕ್ತಿಪಾತ ದೀಕ್ಷೆ ಲಭಿಸಿದೆ. ಆಚಾರ್ಯಶ್ರೀ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಾಯಿಯ ಚಿಕ್ಕಪ್ಪ ಶ್ರೀ ಬೋಧಾನಂದ ಸರಸ್ವತೀಜಿ ಅವರಿಂದ ‘ಹಠಯೋಗ’ವನ್ನು ಕಲಿತರು.

ಶ್ರೀ ಸತ್ಯಾನಂದ ಸರಸ್ವತಿಯವರು ಸ್ಥಾಪಿಸಿದ ‘ಬಿಹಾರ ಸ್ಕೂಲ್ ಆಫ್ ಯೋಗ’, ಡಾ. ಗೀತಾನಂದರ ಪಾಂಡಿಚೇರಿಯ ‘ಅಂತರಾಷ್ಟ್ರೀಯ ಯೋಗ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ’, ವಿಷ್ಣುದೇವಾನಂದ ಮುಂತಾದವರು ಸ್ಥಾಪಿಸಿದ ‘ವೇದಾಂತ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ’ದಿಂದ ಶಿವಾನಂದ ಯೋಗ ಈ ಸಂಸ್ಥೆಗಳಿಂದ ಯೋಗ ವಿದ್ಯಾ ಕೋರ್ಸ್‌ಗಳನ್ನೂ ಆಚಾರ್ಯಶ್ರೀ ಅವರು ಅಭ್ಯಾಸ ಮಾಡಿದ್ದಾರೆ. ಅವರ ಭಾರತದ ವಿವಿಧ ಯೋಗ, ತಂತ್ರ ಮತ್ತು ವೇದಾಂತ ಗುರುಗಳು ಮತ್ತು ಆಶ್ರಮಗಳೊಂದಿಗೆ ನೇರ ಅಥವಾ ಪರೋಕ್ಷ ಸಂಬಂಧವಿದೆ.

ಆಚಾರ್ಯಶ್ರೀ ಕೆ.ಆರ್. ಮನೋಜ ಅವರು ತಮ್ಮ ಜೀವನವನ್ನು ಯೋಗ ವಿದ್ಯಾ, ಆಧ್ಯಾತ್ಮ ವಿಜ್ಞಾನ, ಭಾರತೀಯ ಸಂಸ್ಕೃತಿ ಮತ್ತು ವಿದ್ಯಾರ್ಥಿ ಶ್ರೇಷ್ಠತೆಗಳ ಪ್ರಸಾರಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅವರು ಮಲಯಾಳಂ ಭಾಷೆಯಲ್ಲಿ ‘ಭಾರತ ಪ್ರಭಾವಂ’ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಆಚಾರ್ಯಶ್ರೀ ಕೆ.ಆರ್. ಮನೋಜ ಮತ್ತು ಅವರ ಸಂಸ್ಥೆಗಳಿಗೆ ದೊರೆತ ಪ್ರಶಸ್ತಿಗಳು

1. 2019 ರಲ್ಲಿ ಹಿಂದೂ ಸಂಸತ್ತಿನ ಆತ್ಮೀಯ ಸಭೆಯ ವತಿಯಿಂದ ‘ಕರ್ಮರತ್ನ ಪುರಸ್ಕಾರ’

2. ‘ಶಾಶ್ವತ ಸನಾತನ ಪ್ರತಿಷ್ಠಾನ’ದ ವತಿಯಿಂದ 2023 ರಲ್ಲಿ ‘ಧರ್ಮಾಚರಣ’ ವಿಭಾಗದಲ್ಲಿ ‘ಅರವಿಂದೋ ಸನ್ಮಾನ’

3. ಏಪ್ರಿಲ್ 2024 ರಲ್ಲಿ ‘ಸನಾತನ ಧರ್ಮ ಪರಿಷತ್ತು’ನಿಂದ ‘ಸ್ವಾಮಿ ಮೃಡಾನಂದ ಸ್ಮಾರಕ ಆಧ್ಯಾತ್ಮಿಕ ಪುರಸ್ಕಾರ’

4. ‘ಅಣಿಯೂರ ಶ್ರೀ ದುರ್ಗಾ ಭಗವತಿ ಕ್ಷೇತ್ರಂ’ ಇವರಿಂದ ‘10 ನೇ ಶ್ರೀ ಚಟ್ಟಂಪಿ ಸ್ವಾಮಿ ಶ್ರೀ ನಾರಾಯಣ ಗುರು ಪ್ರಥಮ ಸಂಗಮ ಸ್ಮೃತಿ ಪುರಸ್ಕಾರ’

5. ಧರ್ಮ ಜಾಗರಣಕ್ಕಾಗಿ ಮೇ 19, 2024 ರಂದು ಪುಣೆಯಲ್ಲಿ ಎರಡನೇ ‘ಅಕ್ಷಯ ಹಿಂದೂ ಪುರಸ್ಕಾರ’

6. ‘ಆಟ್ಟಿಂಗಲ ಕರಿಚಿಯಿಲ ಶ್ರೀ ಗಣೇಶೋತ್ಸವ ಮಂದಿರ ಟ್ರಸ್ಟ್’ ಮತ್ತು ‘ಶ್ರೀ ಗಣೇಶೋತ್ಸವ ಸಮಿತಿ’ ಇವರಿಂದ ಜಂಟಿಯಾಗಿ ಜುಲೈ 14, 2024 ರಂದು 2024 ರ ‘ಗುರು ಶ್ರೇಷ್ಠ ಪುರಸ್ಕಾರ’

7. ಕೇರಳದ ಕೊಲಾಥೂರಿನ ‘ಗಣೇಶ ಸಾಧನಾ ಸೇವಾ ಸಮಿತಿ’ಯಿಂದ ಫೆಬ್ರವರಿ 11, 2025 ರಂದು ‘2025 ಶ್ರೀ ವೆಳ್ಳಕ್ಕಾಟ್ಟ ಗೋಪಾಲ ಕುರುಪ ಕೀರ್ತಿ ಪುರಸ್ಕಾರ’

8. ಇಂಡಿಯನ ಮಾರ್ಷಲ ಆರ್ಟ್ಸ್ ಅಕಾಡೆಮಿಯಿಂದ ‘ಮೂರನೇ ಡಾನ್’ನ ‘ಬ್ಲ್ಯಾಕ್ ಬೆಲ್ಟ್’ ಲಭಿಸಿದೆ.

9. 2023 ರಲ್ಲಿ ಥೈಲ್ಯಾಂಡನ ಬ್ಯಾಂಕಾಕನಲ್ಲಿ ನಡೆದ ಮೂರನೇ ‘ವಿಶ್ವ ಹಿಂದೂ ಕಾಂಗ್ರೆಸ’ನಲ್ಲಿ ಅವರು ‘ಲವ್ ಜಿಹಾದ್’ನಿಂದ ಹಿಂದೂ ಯುವತಿಯರ ರಕ್ಷಣೆ ಮತ್ತು ಆರ್ಷ ವಿದ್ಯಾ ಸಮಾಜದ ಮಹತ್ವ’ ಎಂಬ ವಿಷಯದ ಮೇಲೆ ಭಾಷಣ ಮಾಡಿದರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ವಾಮಿ ಮಿತ್ರಾನಂದರು ಆಚಾರ್ಯಶ್ರೀ ಮನೋಜ ಅವರ ‘ಲವ್ ಜಿಹಾದ್’ ವಿರೋಧಿ ಕಾರ್ಯವನ್ನು ಗಮನಿಸಿ ಅವರನ್ನು ಮತ್ತು ಅವರ ತಂಡವನ್ನು ವಿಶೇಷವಾಗಿ ಸನ್ಮಾನಿಸಿದರು. ‘ಉತ್ರಾಟಂ ತಿರುನಾಲ್ ಸಂಸ್ಕೃತಿ ಸಂಸ್ಥಾನ’ ಅವರ ‘10 ನೇ ಉತ್ರಾಟಂ ತಿರುನಾಲ್ ಸಂಸ್ಮರಣೆ ಕಾರ್ಯಕ್ರಮ’ದಲ್ಲಿ ಧರ್ಮದ ನಿಸ್ವಾರ್ಥ ಮತ್ತು ಅತುಲ ಸೇವೆಗಾಗಿ ಆಚಾರ್ಯ ಮನೋಜ ಅವರನ್ನು ಗೌರವಿಸಿತು.

10. ‘ಆರ್ಷ ವಿದ್ಯಾ ಸಮಾಜಂ’ಗೆ ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯು ಧರ್ಮರಕ್ಷಣಾ ಕಾರ್ಯದಲ್ಲಿ ಅಸಾಧಾರಣ ಕೊಡುಗೆ ನೀಡಿದಕ್ಕಾಗಿ ‘ಮಾಧವಜಿ ಪುರಸ್ಕಾರ 2024’ ರಿಂದ ಸನ್ಮಾನಿಸಿದೆ.


ದೇಶದಲ್ಲಿ ರಾಮರಾಜ್ಯ ಅಥವಾ ಸುರಾಜ್ಯ ಸ್ಥಾಪಿಸಲು ನಡೆಯುತ್ತಿರುವ ಪ್ರಯತ್ನಗಳು


‘ರಾಮೋ ವಿಗ್ರಹವಾನ್ ಧರ್ಮಃ |’ ಎಂದರೆ ಅವತಾರಿ ಪುರುಷ ಶ್ರೀರಾಮನು ಧರ್ಮದ ಮೂರ್ತ ಸ್ವರೂಪ ಆಗಿದ್ದಾನೆ. ಅವರ ‘ರಾಮರಾಜ್ಯ’ದ ಸಿದ್ಧಾಂತವು ಸನಾತನ ಧರ್ಮದ ಮೂಲಭೂತ ತತ್ವಗಳ ಮೇಲೆ ಆಧಾರಿತವಾಗಿದೆ. ಧಾರ್ಮಿಕ ಭವಿಷ್ಯಕ್ಕಾಗಿ ಅರ್ಹ ನಾಯಕರು ಮತ್ತು ಜನರನ್ನು ಸಿದ್ಧಪಡಿಸಲು ಆರ್ಷ ವಿದ್ಯಾ ಸಮಾಜಂ ಸನಾತನ ಧರ್ಮದ ಬೋಧನೆಗಳನ್ನು ನೇರ ಮತ್ತು ಆನ್‌ಲೈನ್ ತರಗತಿಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿದೆ.
ಆರ್ಷ ವಿದ್ಯಾ ಸಮಾಜಂ ವ್ಯವಸ್ಥಿತ ಯೋಜನೆಗಳ ಮೂಲಕ 2047 ರ ವೇಳೆಗೆ ಇಡೀ ಭಾರತ ಮತ್ತು ಜಗತ್ತಿನಲ್ಲಿ ರಾಮರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

‘ಏಕ ಕಥಾ ಪ್ರತ್ಯಾವರ್ತನಾಚಿ – ಒ. ಶ್ರುತಿ’ ಈ ಪುಸ್ತಕದ ಮುಖಪುಟ

ಆಚಾರ್ಯಶ್ರೀ ಕೆ.ಆರ್. ಮನೋಜ ಅವರ ಗಮನಾರ್ಹ ಕಾರ್ಯಗಳು!

ಆಚಾರ್ಯಶ್ರೀ ಕೆ.ಆರ್. ಮನೋಜ ಅವರು ತಮ್ಮ ಅಸಾಧಾರಣ ಆಧ್ಯಾತ್ಮಿಕ ಮಾರ್ಗದರ್ಶನದ ಮೂಲಕ ಲಕ್ಷಾಂತರ ಜನರಿಗೆ ಜ್ಞಾನವನ್ನು ನೀಡಿದ್ದಾರೆ. ಕಟ್ಟರವಾದಿ ಸಿದ್ಧಾಂತಗಳತ್ತ ಆಕರ್ಷಿತರಾಗಿದ್ದ 8 ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರನ್ನು ಸನಾತನ ಧರ್ಮಕ್ಕೆ ಮರಳಿ ತಂದಿದ್ದಾರೆ. ಇದರೊಂದಿಗೆ ಸಮಾಜದಲ್ಲಿ ಧರ್ಮ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವ 30 ಕ್ಕೂ ಹೆಚ್ಚು ಯುವಕರನ್ನು ಅವರು ಸನಾತನ ಧರ್ಮದ ‘ಪೂರ್ಣಾವಧಿ ಪ್ರಚಾರಕ’ರಾಗಿ ತರಬೇತಿ ನೀಡಿದ್ದಾರೆ.

1. ‘ಲವ್ ಜಿಹಾದ್’ ಪ್ರಕರಣಗಳಿಂದ ಯುವಕ ಮತ್ತು ಯುವತಿಯರನ್ನು ರಕ್ಷಿಸಲು ನಡೆಸುತ್ತಿರುವ ಪ್ರಯತ್ನಗಳು

ಮತಾಂತರದ ಪ್ರಕರಣಗಳನ್ನು ನಿಭಾಯಿಸಲು ಆರ್ಷ ವಿದ್ಯಾ ಸಮಾಜವು ದ್ವಿಮುಖ ತಂತ್ರವನ್ನು ಅನುಸರಿಸುತ್ತದೆ.

1 ಅ. ದೀರ್ಘಕಾಲೀನ ಯೋಜನೆ (ಶಿಕ್ಷಣ ಮತ್ತು ತಡೆಗಟ್ಟುವಿಕೆ)

ದೀರ್ಘಕಾಲೀನ ಅಭಿಯಾನದ ಅಡಿಯಲ್ಲಿ ವಿವಿಧ ವಯೋಮಾನದವರಿಗೆ ಮತ್ತು ಹಂತಗಳಿಗಾಗಿ ‘ಆನ್‌ ಲೈನ್ ’ ಮತ್ತು ನೇರ ಎರಡೂ ರೀತಿಯಲ್ಲಿ ಕ್ರಮಬದ್ಧ, ವೈಜ್ಞಾನಿಕ ಪಠ್ಯಕ್ರಮಗಳನ್ನು ಲಭ್ಯಗೊಳಿಸಲಾಗಿದೆ.

1. ಆಧ್ಯಾತ್ಮಿಕ ಶಾಸ್ತ್ರ (ಸನಾತನ ಧರ್ಮ, ಇತರ ಧರ್ಮಗಳ ತುಲನಾತ್ಮಕ ಅಧ್ಯಯನ, ಇತರ ತತ್ವಶಾಸ್ತ್ರಗಳು, ತರ್ಕಶಾಸ್ತ್ರ)

2. ಭಾರತೀಯ ಸಂಸ್ಕೃತಿ (ಭಾರತದ ನಿಜವಾದ ಮತ್ತು ಅವಿಭಾಜ್ಯ ಇತಿಹಾಸ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳು, ಸ್ವಾತಂತ್ರ್ಯ ಹೋರಾಟ, ಪ್ರಮುಖ ವ್ಯಕ್ತಿತ್ವಗಳು, ಚಳುವಳಿಗಳು, ಸಮಕಾಲೀನ ಸಮಸ್ಯೆಗಳು ಮತ್ತು ಅವುಗಳ ಪರಿಹಾರ)

3. ಆರ್ಷ ಯೋಗ ವಿದ್ಯಾ (ಷೋಡಶ ತತ್ವ ಯೋಗ ವಿದ್ಯಾ)

4. ವಿದ್ಯಾರ್ಥಿ ಶ್ರೇಷ್ಠತಾ ಕಾರ್ಯಕ್ರಮ

5. ಸುದರ್ಶನಂ (ಎಲ್ಲಾ ರೀತಿಯ ‘ಬ್ರೈನ್‌ವಾಷಿಂಗ್’ ಪರಿಣಾಮಗಳ ವಿರುದ್ಧ ಒಂದು ಪರಿಣಾಮಕಾರಿ ವೈಚಾರಿಕ ಪರಿಹಾರ)

6. ಮೃತ್ಯುಂಜಯಂ (ಸಮಗ್ರ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮ)

7. ವಿದ್ಯಾಜ್ಯೋತಿ ವಿದ್ಯಾರ್ಥಿವೇತನ ಕಾರ್ಯಕ್ರಮ

ಈ ಪಠ್ಯಕ್ರಮಗಳು ಸಮಾಜದಲ್ಲಿ ಪ್ರಚಲಿತವಿರುವ ಎಲ್ಲಾ ತಪ್ಪುಗ್ರಹಿಕೆಗಳು, ಪ್ರಶ್ನೆಗಳು ಮತ್ತು ಸುಳ್ಳು ಕಲ್ಪನೆಗಳನ್ನು ದೂರ ಮಾಡುತ್ತವೆ ಮತ್ತು ಸನಾತನ ಧರ್ಮದ ನಿಜವಾದ ಈಶ್ವರ ದರ್ಶನ (ತತ್ವಶಾಸ್ತ್ರ) ಮತ್ತು ಜೀವನ ದರ್ಶನ (ತತ್ವಶಾಸ್ತ್ರ)ವನ್ನು ಕಲಿಸುತ್ತವೆ. ಇದರೊಂದಿಗೆ ಸನಾತನ ಧರ್ಮದ ನಿಜವಾದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಹ ಕಲಿಸಲಾಗುತ್ತದೆ. ಜನರನ್ನು ಗೊಂದಲಕ್ಕೀಡು ಮಾಡಲು ಮತ್ತು ಅವರ ‘ಬ್ರೈನ್‌ ವಾಶ್’ ಮಾಡಲು ಕಾರ್ಯನಿರ್ವಹಿಸುತ್ತಿರುವ ಶಕ್ತಿಗಳು ಬಳಸುವ ಕಥೆಗಳು ಮತ್ತು ಹರಡುವ ಸುಳ್ಳುಗಳನ್ನು ಉಪನ್ಯಾಸಗಳ ಮೂಲಕ ಬಹಿರಂಗಪಡಿಸಲಾಗಿದೆ.

‘ಸನಾತನ ಧರ್ಮವನ್ನು ಕಲಿಸಲು ಸೂಕ್ತ ಪಠ್ಯಕ್ರಮ ಮತ್ತು ವ್ಯವಸ್ಥೆಗಳ ಕೊರತೆ’ ಹಿಂದೂ ಸಮಾಜದ ಅನೇಕ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳ ಮೂಲವಾಗಿದೆ. ಸನಾತನ ಧರ್ಮದ ಕುರಿತಾದ ಒಂದು ವ್ಯಾಪಕ ಪಠ್ಯಕ್ರಮ, ಅದರ ಮೂಲಭೂತ ಶಬ್ದಕೋಶವು ನಮ್ಮ ಪ್ರಾಚೀನ ಇತಿಹಾಸ ಮತ್ತು ಪ್ರಸ್ತುತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬಹುದು. ಅದರಿಂದಲೇ ಸ್ವಾಭಿಮಾನಿ ಮತ್ತು ಜವಾಬ್ದಾರಿಯುತ ವ್ಯಕ್ತಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಯುವಕರನ್ನು ಸಿಲುಕಿಸಲು ಇಸ್ಲಾಮಿ ಶಕ್ತಿಗಳು ಬಳಸುವ ಅನೇಕ ವಿಧಾನಗಳಲ್ಲಿ ‘ಲವ್ ಜಿಹಾದ್’ ಒಂದು ವಿಧಾನವಾಗಿದೆ. ನಮ್ಮ ಪಠ್ಯಕ್ರಮಗಳ ಮೂಲಕ ನಾವು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ನೈತಿಕ ಧೈರ್ಯವನ್ನು ಬೆಳೆಸಿ ಅವರನ್ನು ಸಶಕ್ತಗೊಳಿಸುತ್ತೇವೆ. ಇದರಿಂದ ಯುವ ಪೀಳಿಗೆಯು ಎಲ್ಲಾ ಆಧ್ಯಾತ್ಮಿಕ ಮತ್ತು ತಾತ್ವಿಕ ಸಿದ್ಧಾಂತಗಳನ್ನು ಗಂಭೀರವಾಗಿ ಪರೀಕ್ಷಿಸಲು ಮತ್ತು ಅವು ಅನುಸರಿಸಲು ಮತ್ತು ಸ್ವೀಕರಿಸಲು ಯೋಗ್ಯವಾಗಿದೆಯೇ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ. ಆ ಸಿದ್ಧಾಂತವು ಸ್ವಂತಕ್ಕೆ, ಸಮಾಜಕ್ಕೆ ಮತ್ತು ಇಡೀ ಮಾನವಕುಲಕ್ಕೆ ಪ್ರಯೋಜನಕಾರಿಯಾಗಿದೆಯೇ? ಇತಿಹಾಸ ಮತ್ತು ಪ್ರಸ್ತುತ ಘಟನೆಗಳ ಪುರಾವೆಗಳು, ಅವರ ಸ್ವಂತ ವರ್ತಮಾನ ಮತ್ತು ಭವಿಷ್ಯದ ಜೀವನದ ಮೇಲೆ, ಅವರ ಭವಿಷ್ಯದ ಪೀಳಿಗೆಗಳ ಮೇಲೆ, ರಾಷ್ಟ್ರದ ಮೇಲೆ ಮತ್ತು ಒಟ್ಟಾರೆ ಜಗತ್ತಿನ ಮೇಲೆ ಆಗುವ ಪರಿಣಾಮಗಳನ್ನು ನಾವು ಅವರಿಗೆ ಈ ಮೂಲಕ ವಿವರಿಸುತ್ತೇವೆ. ಈ ರೀತಿಯಾಗಿ ಅವರು ಸಾವಿರಾರು ಯುವಕರು ಮತ್ತು ವೃದ್ಧರು, ಮಹಿಳೆಯರು ಮತ್ತು ಪುರುಷರಿಗೆ ಶಿಕ್ಷಣ ನೀಡಿದ್ದಾರೆ. ಇದರ ಪರಿಣಾಮವಾಗಿ ಮತಾಂತರವನ್ನು ತಡೆದು ದೇವರ ನಿಜವಾದ ಕಲ್ಪನೆ ಮತ್ತು ಸನಾತನ ಧರ್ಮದ ಸರಿಯಾದ ಬೋಧನೆಯನ್ನು ನೀಡಲಾಗುತ್ತದೆ.

ಆಚಾರ್ಯಶ್ರೀ ಕೆ.ಆರ್. ಮನೋಜ (ಎಡಭಾಗದಲ್ಲಿ) ಅವರಿಗೆ 2023 ರಲ್ಲಿ ‘ಧರ್ಮಾಚರಣ’ ವಿಭಾಗದಲ್ಲಿ ‘ಅರವಿಂದೋ ಸಮ್ಮಾನ’ ನೀಡಲಾಯಿತು.

1 ಆ. ತುರ್ತುಪರಿಸ್ಥಿತಿಯ ಪರಿಹಾರಗಳು

ಯಾವ ಯುವಕರು ಈಗಾಗಲೇ ಇತರ ಧರ್ಮಗಳಿಗೆ ಮತಾಂತರಗೊಂಡಿದ್ದಾರೋ ಅಥವಾ ವಿವಿಧ ರೀತಿಯಲ್ಲಿ ‘ಬ್ರೈನ್‌ವಾಶ್’ ಆಗಿದ್ದಾರೋ, ಅವರಿಗಾಗಿ ಆರ್ಷ ವಿದ್ಯಾ ಸಮಾಜವು ಆಧ್ಯಾತ್ಮಿಕ ಶಾಸ್ತ್ರವನ್ನು ಆಧರಿಸಿದ ‘ಡಿ-ಬ್ರೈನ್‌ವಾಷಿಂಗ್’, ಮತಾಂತರ ವಿರೋಧಿ (ಆಂಟಿಇಂಡಾಕ್ಟ್ರಿನೇಷನ್) / ‘ಡಿ-ರಾಡಿಕಲೈಸೇಷನ್’ (ಮೂಲಭೂತ ವಿಚಾರಗಳನ್ನು ನಾಶಪಡಿಸುವುದು) ಮುಂತಾದ ಸಮಾಲೋಚನೆಗಳನ್ನು ನೀಡುತ್ತದೆ. ಇದು ಆಧ್ಯಾತ್ಮಿಕ, ವೈಚಾರಿಕ ಮತ್ತು ಮಾನಸಿಕ ಸಮಾಲೋಚನೆಯ ಸಂಯೋಜಿತ ವಿಧಾನವಾಗಿದೆ. ವೈಚಾರಿಕ ಸಮಾಲೋಚನೆಯು ತರ್ಕಶಾಸ್ತ್ರದ ತತ್ವಗಳ ಪ್ರಕಾರ ವಾದವಿವಾದವನ್ನು ಆಧರಿಸಿದೆ.

1. ಸಾಮಾನ್ಯ ಜ್ಞಾನದ ಬಳಕೆ

2. ಚರ್ಚೆ ಮತ್ತು ವಾದವಿವಾದಗಳಲ್ಲಿ ಭಾಗವಹಿಸುವ ಉತ್ಸಾಹ

3. ಸಾಕ್ಷಿ ಸಿಕ್ಕಾಗ ಸತ್ಯವನ್ನು ಸ್ವೀಕರಿಸುವ ಪ್ರಾಮಾಣಿಕತೆ

ಮೇಲಿನ 3 ಷರತ್ತುಗಳನ್ನು ಪೂರೈಸುವ ಯಾವುದೇ ವ್ಯಕ್ತಿಗೆ ಸತ್ಯದ ಅರಿವಾಗುತ್ತದೆ ಎಂದು ಆರ್ಷ ವಿದ್ಯಾ ಸಮಾಜವು ಖಚಿತಪಡಿಸುತ್ತದೆ.

ಯಾರು ಪ್ರೇಮ ಸಂಬಂಧಗಳಿಂದ ಮತಾಂತರಗೊಳ್ಳುತ್ತಾರೋ, ಅವರಿಗೆ ಸಮತೋಲಿತ ಭಾವನಾತ್ಮಕ ಸ್ಥಿತಿಯಲ್ಲಿ ತಾರ್ಕಿಕ ಚರ್ಚೆಯ ಮೂಲಕ ಸರಿಯಾದ ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತಹ ಸೂಕ್ತ ವಾತಾವರಣವನ್ನು ಒದಗಿಸಲಾಗುತ್ತದೆ.


ಆಚಾರ್ಯಶ್ರೀ ಕೆ.ಆರ್. ಮನೋಜ ಅವರ ಯುವಕರಿಗಾಗಿ ಸಂದೇಶ

ಪ್ರತಿಯೊಬ್ಬ ವ್ಯಕ್ತಿಯೂ ಸನಾತನ ಧರ್ಮದ 5 ಮಹಾನ್ ಕರ್ತವ್ಯಗಳನ್ನು ಪಾಲಿಸಬೇಕೆಂದು ನಾನು ವಿನಂತಿಸುತ್ತೇನೆ.

ಅಧ್ಯಯನ: ಸ್ವಯಂ ಅಧ್ಯಯನ ಪದ್ಧತಿಯನ್ನು ಆಧರಿಸಿದ ಯೋಜಿತ ರೀತಿಯಲ್ಲಿ ಅಧ್ಯಯನ ಮಾಡಿರಿ.

ಅನುಷ್ಠಾನ: ಯಾವುದೇ ಅನೈತಿಕತೆ, ದುರ್ವರ್ತನೆ ಅಥವಾ ದಬ್ಬಾಳಿಕೆ ಇಲ್ಲದೆ ಸನಾತನ ಧರ್ಮದ ತತ್ವಗಳನ್ನು (ಜೀವನ ಸಿದ್ಧಾಂತ), ಪದ್ಧತಿಗಳನ್ನು (ಆಚರಣೆ) ಮತ್ತು ನಿಯಮಗಳನ್ನು (ಸೂಚನೆ) ಪಾಲಿಸಿರಿ.

ಪ್ರಚಾರ: ಜನರ ಎಲ್ಲಾ ರೀತಿಯ ಪ್ರಶ್ನೆಗಳು, ಅನುಮಾನಗಳು ಮತ್ತು ಭ್ರಮೆಗಳನ್ನು ದೂರ ಮಾಡಿ ನಿಜವಾದ ಸನಾತನ ಧರ್ಮವನ್ನು ಪ್ರಚಾರ ಮಾಡಿರಿ.

ಅಧ್ಯಾಪನ: ಒಂದು ನಿರ್ದಿಷ್ಟ ಪಠ್ಯಕ್ರಮದ ಆಧಾರದ ಮೇಲೆ ಸನಾತನ ಧರ್ಮದ ವೈಜ್ಞಾನಿಕ ಮತ್ತು ಕ್ರಮಬದ್ಧ ಶಿಕ್ಷಣವನ್ನು ನೀಡಿರಿ.

ಸಂರಕ್ಷಣೆ: ಹಿಂದೂ ಧರ್ಮ, ಜ್ಞಾನ, ಸಂಸ್ಕೃತಿ, ಸಮಾಜ, ರಾಷ್ಟ್ರ ಮತ್ತು ಜಗತ್ತನ್ನು ಎಲ್ಲಾ ರೀತಿಯ ಸವಾಲುಗಳಿಂದ ರಕ್ಷಿಸಿರಿ.

ಆರ್ಷ ವಿದ್ಯಾ ಸಮಾಜಂ ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕೌಶಲ್ಯಗಳು, ಪ್ರತಿಭೆ, ಸಾಮರ್ಥ್ಯ ಮತ್ತು ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅವರ ದೌರ್ಬಲ್ಯಗಳು, ಭಯ, ಅಭದ್ರತೆಗಳನ್ನು ಜಯಿಸಲು ಆದರ್ಶ ಮಾನವರನ್ನಾಗಿ ಮಾಡಲು ಪ್ರಯತ್ನಿಸುತ್ತದೆ. ಸಾಮಾಜಿಕ ಒತ್ತಡಗಳನ್ನು ಸಕಾರಾತ್ಮಕವಾಗಿ ಎದುರಿಸಲು ಅವರನ್ನು ಸಶಕ್ತಗೊಳಿಸಲಾಗುತ್ತದೆ. ಇದರಿಂದ ಅವರು ಇತರರಿಗೆ ಪ್ರೇರಣೆಯಾಗಿ ಸನಾತನ ಧರ್ಮದ ಪ್ರಸಾರದಲ್ಲಿ ಮುಂಚೂಣಿಯಲ್ಲಿರಲು ಸಾಧ್ಯವಾಗುತ್ತದೆ.

ಈ ರೀತಿಯಾಗಿ ಆರ್ಷ ವಿದ್ಯಾ ಸಮಾಜವು ಮಾರ್ಚ್ 2025 ರವರೆಗೆ 8 ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರನ್ನು ಸರಿಯಾದ ಮಾರ್ಗಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಸಿರಿಯಾ, ಅಫಘಾನಿಸ್ತಾನ ಮತ್ತು ಇರಾಕನಲ್ಲಿ ‘ಮಾನವ ಬಾಂಬ್‌’ಗಳಾಗಿದ್ದ ಜನರನ್ನು ಸರಿಯಾದ ಮಾರ್ಗಕ್ಕೆ ಮರಳಿ ತರುವ ಮೂಲಕ ಆರ್ಷ ವಿದ್ಯಾ ಸಮಾಜಂ ಸಾವಿರಾರು ಕುಟುಂಬಗಳು, ಸಮಾಜ, ರಾಷ್ಟ್ರ ಮತ್ತು ಇಡೀ ಜಗತ್ತನ್ನು ರಕ್ಷಿಸಿದೆ.

ಆರ್ಷ ವಿದ್ಯಾ ಸಮಾಜಂ ಇಲ್ಲಿಯವರೆಗೆ 1 ಸಾವಿರಕ್ಕೂ ಹೆಚ್ಚು ಜನರಲ್ಲಿ ವಿವಿಧ ರೀತಿಯ ಕಟ್ಟರವಾದಿ ಸಿದ್ಧಾಂತಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬೆಳೆಸಿದೆ. ಸನಾತನ ಧರ್ಮವನ್ನು ಕಲಿಯಲು ಬಂದವರು ಮಾತ್ರವಲ್ಲದೆ, ಧರ್ಮವನ್ನು ತೀವ್ರವಾಗಿ ವಿರೋಧಿಸುವ ಮತ್ತು ಸನಾತನ ಧರ್ಮವನ್ನು ತ್ಯಜಿಸಲು ಬಯಸುವವರು ಸಹ ಇಂದು ಸನಾತನ ಧರ್ಮದ ಧ್ವಜವನ್ನು ಹಾರಿಸುತ್ತಾ ಆರ್ಷ ವಿದ್ಯಾ ಸಮಾಜದ ಪ್ರಮುಖ ಯೋಧರಾಗಿದ್ದಾರೆ. 30 ಕ್ಕೂ ಹೆಚ್ಚು ಜನರು ಪೂರ್ಣಾವಧಿ ಸನಾತನ ಧರ್ಮದ ಪ್ರಚಾರಕರಾಗಿದ್ದಾರೆ. ಅವರಲ್ಲಿ 4 ಜನರು ತಮ್ಮ ಮತಾಂತರ ಮತ್ತು ಸ್ವಧರ್ಮಕ್ಕೆ ಮರಳಿದ ಪ್ರಯಾಣದ ಅನುಭವಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ.

‘ಒರು ಪರಾವರ್ತನತ್ತಿನ್ಡೆ ಕಥ – ಒ. ಶ್ರುತಿ’, ‘ಇರುಳಿಲ್ನಿನ್ ವೆಳಿಚತ್ತಿಲೆಕ್ಕ್ – ಚಿತ್ರಾ ಜಿ. ಕೃಷ್ಣನ್’, ‘ಪುನರ್ಜನಿ – ಶಾಂತಿ ಕೃಷ್ಣ ’, ‘ಙಾನ್ ಆತಿರಾ – ಎಸ್ ಆತಿರಾ’ ಈ ಪುಸ್ತಕಗಳು ಮಲಯಾಳಂನಲ್ಲಿ ಲಭ್ಯವಿವೆ. ಇವುಗಳಲ್ಲಿ ‘ಸ್ಟೋರಿ ಆಫ್ ರಿವರ್ಷನ್ – ಒ. ಶ್ರುತಿ’, ‘ರಿಬಾರ್ನ್’, ‘ಐ. ಅತಿರಾ’ ಈ 3 ಪುಸ್ತಕಗಳು ಇಂಗ್ಲಿಷ್‌ನಲ್ಲಿ, ‘ಏಕ್ ಕಥಾ ಪ್ರತ್ಯಾವರ್ತನಾಚಿ – ಒ. ಶ್ರುತಿ’ ಇದು ಮರಾಠಿಯ ಅನುವಾದಿತ ಪುಸ್ತಕ, ಹಿಂದಿ ಭಾಷೆಯಲ್ಲಿ ‘ಏಕ್ ಪ್ರತ್ಯಾವರ್ತನ್ ಕೀ ಕಹಾನಿ – ಒ. ಶ್ರುತಿ’ ಮತ್ತು ಕನ್ನಡದಲ್ಲಿ ‘ಒಂದು ಪರಾವರ್ತನೆಯ ಕಥೆ – ಒ. ಶ್ರುತಿ’, ‘ಪುನರಾಜನಿ – ಸಂಥಿ ಕೃಷ್ಣ’ ಈ ಪುಸ್ತಕಗಳು ಲಭ್ಯವಿವೆ.

2. ಸಮಾಜವನ್ನು ಧರ್ಮಶಿಕ್ಷಿತಗೊಳಿಸಲು ಕೈಗೊಂಡಿರುವ ಉಪಕ್ರಮಗಳು

ಆರ್ಷ ವಿದ್ಯಾ ಸಮಾಜಂನ ಸನಾತನ ಧರ್ಮ ಪ್ರಚಾರದ ಒಂದು ಪದ್ಧತಿಯಿದೆ, ಇದರ ಉದ್ದೇಶ ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪ್ರಸಾರ ಮಾಡುವುದು. ಭಾರತದಲ್ಲಿ ಮತ್ತು ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳ ಮೂಲಕ ಸನಾತನ ಧರ್ಮವನ್ನು ಪ್ರಚಾರ ಮಾಡಲು ತರಬೇತಿ ಪಡೆದ ಮತ್ತು ಅರ್ಹ ವ್ಯಕ್ತಿಗಳನ್ನು ಸಿದ್ಧಪಡಿಸಿ ಅವರನ್ನು ನೇಮಿಸಲಾಗುತ್ತದೆ.
ಪ್ರತಿ ಮನೆಗೆ ಭೇಟಿ ನೀಡಿ ಶೈಕ್ಷಣಿಕ ಮತ್ತು ಸೇವಾತ್ಮಕ ಉಪಕ್ರಮಗಳನ್ನು ಕೈಗೊಳ್ಳುವ ಮತ್ತು ಪ್ರತಿ ಕುಟುಂಬಕ್ಕೆ ಸನಾತನ ಧರ್ಮದ ಮಹತ್ವವನ್ನು ತೋರಿಸಿಕೊಡುವ ಧರ್ಮಪ್ರಚಾರಕರನ್ನು ನಿರ್ಮಿಸುವುದು, ಈ ಸ್ವಾಮಿ ವಿವೇಕಾನಂದರ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಧರ್ಮಪ್ರಚಾರಕರನ್ನು ಸಿದ್ಧಪಡಿಸಲಾಗುತ್ತದೆ. ಈ ಧರ್ಮಪ್ರಚಾರಕರು ಹಿಂದೂಗಳಲ್ಲಿ ‘ಮತಾಂತರದ ಅಪಾಯಗಳು ಮತ್ತು ಅದರ ದುಷ್ಪರಿಣಾಮಗಳು ಮತ್ತು ಸೃಷ್ಟಿಯಾಗುವ ಮಾನಸಿಕ ಪ್ರಭಾವ’ಗಳ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಸುತ್ತಾರೆ. ವಿವಿಧ ಭಾಷೆಗಳಲ್ಲಿನ ‘ಆನ್‌ಲೈನ್’ ಮತ್ತು ನೇರ ವಿಧಾನಗಳ ಮೂಲಕ ಎಲ್ಲಾ ಪಠ್ಯಕ್ರಮಗಳ ಪ್ರಚಾರದ ಮೂಲಕ ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪ್ರಚಾರ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

3. ಹಿಂದೂಗಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಸ್ವಯಂರಕ್ಷಣೆ ಅಥವಾ ಇತರ ಕೌಶಲ್ಯಗಳನ್ನು ಕಲಿಸುವುದು

ಸ್ವಯಂರಕ್ಷಣಾ ತರಬೇತಿಯು ಆರ್ಷ ವಿದ್ಯಾ ಸಮಾಜಂನ ಪಠ್ಯಕ್ರಮದ ಮತ್ತು ದೈನಂದಿನ ದಿನಚರಿಯ ಒಂದು ಅವಿಭಾಜ್ಯ ಅಂಗವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಮಹಿಳೆಯರು-ಪುರುಷರು, ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಸ್ವಯಂರಕ್ಷಣೆಗಾಗಿ ತರಬೇತಿ ಪಡೆದಿದ್ದಾರೆ. ಇದರಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ‘ಮಾರ್ಷಲ್ ಆರ್ಟ್ಸ್’ಗಳು ಸೇರಿವೆ. – ಆಚಾರ್ಯಶ್ರೀ ಕೆ.ಆರ್. ಮನೋಜ

ಸಂಪಾದಕೀಯ ನಿಲುವು

ಯುವ ಪೀಳಿಗೆಯ ಬೌದ್ಧಿಕ ಮತ್ತು ನೈತಿಕ ಧೈರ್ಯವನ್ನು ಬೆಳೆಸಿದರೆ ಮಾತ್ರ ಅವರು ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಲು ಸಾಧ್ಯ!