ಶಾಸ್ತ್ರ ಮತ್ತು ಶೌರ್ಯದ ಮೂಲಕ ಬೌದ್ಧಿಕ ಸ್ಥರದಲ್ಲಿ ಮೂಲಭೂತ ಪರಿವರ್ತನೆ ತರುವ ಸಲುವಾಗಿ ಹೋರಾಡುವ ಯೋಧ ಶ್ರೀ. ಸಂಜೀವ ನೇವರ

ನೋಯಡ (ಉತ್ತರಪ್ರದೇಶ) ಶ್ರೀ. ಸಂಜೀವ ನೇವರ ಅವರು’ ಅಗ್ನಿ ಸಮಾಜ ‘ ,’ ಜೆಮ್ಸ್ ಆಫ್ ಬಾಲಿವುಡ್ ‘ ,’ ಸೇವಾ ನ್ಯಾಯ ಉತ್ಥಾನ ಫೌಂಡೇಶನ್ ‘ ಎಂಬ ಸಂಸ್ಥೆಗಳ ಸಂಸ್ಥಾಪಕರಾಗಿದ್ದಾರೆ. ‘ ಪ್ರಾಚ್ಯಮ್ ‘ ಎಂಬ ‘ ಒಟಿಟಿ ಪ್ಲಾಟ್ ಫಾರಂ ‘ ಗೆ ನೀಡಿರುವ ಸಂದರ್ಶನದಲ್ಲಿ ಶ್ರೀ. ಸಂಜೀವ ನೇವರ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ ಭಾರತೀಯ ವ್ಯವಸ್ಥೆ) ಯ ಪ್ರವೇಶಕ್ಕಾಗಿ ನಡೆಯುವ ಸಂದರ್ಶನದಲ್ಲಿನ ಒಂದು ಪ್ರಸಂಗವನ್ನು ಹೇಳಿದರು. ‘ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಏಕೆ ಪಡೆಯಬೇಕು?’ ಎಂದು ಸಂದರ್ಶಕರು ಅವರಿಗೆ ಕೇಳಿದ್ದರು, ಅದಕ್ಕೆ ಶ್ರೀ. ಸಂಜೀವ ಅವರ ಉತ್ತರ ಹೀಗಿತ್ತು, ” ಭಗವದ್ಗೀತೆಯ ಪ್ರಚಾರ ಮಾಡುವುದಕ್ಕಾಗಿ” ಜಿಜ್ಞಾಸೆಗಾಗಿ ಸಂದರ್ಶಕರ’ ಪ್ಯಾನಲ್ ಯಿಂದ ಇನ್ನೊಂದು ಪ್ರಶ್ನೆ ಕೇಳಲಾಯಿತು. ಹಾಗಾದರೆ ಆ ಕಾರ್ಯವನ್ನು ತಕ್ಷಣ ಏಕೆ ಆರಂಭಿಸಬಾರದು? ಅದಕ್ಕೆ ಶ್ರೀ. ಸಂಜೀವ ಅವರು, ನನಗೆ ಐಐಎಂ ನಲ್ಲಿ ಪ್ರತಿಷ್ಠೆಗಾಗಿ ಅಲ್ಲ, ಗೀತೆಯ ನಿಜವಾದ ಸಾರಾ ಎಲ್ಲಾ ಬುದ್ಧಿವಂತ ಜನರವರೆಗೆ ತಲುಪಿಸಲು ಸಹಾಯವಾಗುವುದು, ಅದಕ್ಕಾಗಿ ಪ್ರವೇಶ ಬೇಕಿದೆ. ‘ಈ ಸಂದರ್ಶನದ ನಂತರ ೨ ವರ್ಷದಲ್ಲಿ ಅವರು ಐಐಎಂ ಕೋಲಕಾತಾದಿಂದ ಪದವಿ ಪಡೆದರು.

ಶ್ರೀ. ಸಂಜೀವ ನೇವರ


ವಿಶೇಷ ಲೇಖನ


ಛತ್ರಪತಿ ಶಿವಾಜಿ ಮಹಾರಾಜ್ ಅವರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಗಳು ಮತ್ತು ಸರದಾರರು ಮಾಡಿರುವ ತ್ಯಾಗ ಸರ್ವೋಚ್ಛವಾಗಿದೆ ಅದರಂತೆಯೇ ಇಂದಿಗೂ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರೀಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ನಾವು ಶ್ರೀ. ಸಂಜೀವ ನೇವರ ಅವರು ವೇದಗಳ ಪುನರುಜ್ಜೀವನಕ್ಕಾಗಿ ಮಾಡಿರುವ ಕಾರ್ಯ ಮತ್ತು ಇತರ ಅನೇಕ ಸ್ಥರದಲ್ಲಿ ಅವರು ನೀಡಿರುವ ವಿವಿಧ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ ! – ಸಂಪಾದಕರು

೧.’ ಡೇಟಾ ಸೈನ್ಸ್ ‘ ಬದಲು ಧರ್ಮದ ಆಯ್ಕೆ ಮಾಡುವ ವಿದ್ವಾನ

ಬೌದ್ಧಿಕ ಗೊಂದಲದ ಮತ್ತು ಅನಾನುಕೂಲ ಇರುವ ಪ್ರಸ್ತುತ ಕಾಲದಲ್ಲಿ ಶ್ರೀ. ಸಂಜೀವ ನೇವರ ಅವರು ತೀಕ್ಷ್ಣ ಬುದ್ಧಿ ಮತ್ತು ಅಪಾರ ಇಚ್ಛಾ ಶಕ್ತಿಯಿಂದ ಕಾರ್ಯ ಮಾಡುತ್ತಿದ್ದಾರೆ. ‘ ಐಐಟಿ’ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಭಾರತೀಯ ತಂತ್ರಜ್ಞಾನ ಸಂಸ್ಥೆ ) ಮತ್ತು ‘ ಐಐಎಂ’ ಎರಡು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶ್ರೀ. ಸಂಜೀವ ನೇವರ ಅವರು ವಿದ್ಯಾಭ್ಯಾಸ ಮಾಡಿದ್ದಾರೆ. ಸಂಪೂರ್ಣ ಭೌತಿಕ ಜಗತ್ತು ಅದರ ಮೇಲೆಯೇ ನಿಂತಿದೆ.’ ಡೇಟಾ ಸೈನ್ಸ್’ ನ ಕಾಲದ, ಕಾರ್ಪೊರೇಟ್ ಜಗತ್ತಿನಲ್ಲಿನ ಲಾಭದಾಯಕ ಪ್ರಸ್ತಾವಗಳು ಮತ್ತು ಉನ್ನತ ಪದವಿಗಳಿಂದ ಸಿಗುವ ಗೌರವ, ಇದೆಲ್ಲವೂ ಅವರ ಹತ್ತಿರ ಇದೆ. (ಡೇಟಾ ಸೈನ್ಸ್ ಎಂದರೆ ಮಾಹಿತಿಯ ಸಂಕಲನ, ವಿಶ್ಲೇಷಣೆ ಮತ್ತು ಒಳಗೊಂಡಿರುವ ಪದ್ಧತಿಗಳನ್ನು ಸಂಶೋಧನೆಗಾಗಿ ವಿವಿಧ ತಂತ್ರಜ್ಞಾನ ಮತ್ತು ಪದ್ಧತಿಗಳನ್ನು ಉಪಯೋಗಿಸುವುದು.) ಆದರೂ ನೇವರ ಅವರು ಸಂಪೂರ್ಣವಾಗಿ ಬೇರೆಯೇ ಮಾರ್ಗವನ್ನು ಆರಿಸಿಕೊಂಡರು. ‘ ವೇದಗಳ ಪುನರುಜ್ಜೀವನ, ವೈದಿಕ ಸಂಸ್ಕೃತಿಯ ಪ್ರಸಾರ ಮತ್ತು ಧರ್ಮ ವಿರೋಧಿ ಶಕ್ತಿಗಳ ಮುಖವಾಡವನ್ನು ತೆಗೆಯುವ ಕಾರ್ಯವನ್ನು ಅವರು ಆಯ್ಕೆ ಮಾಡಿಕೊಂಡರು.


ಬಾಲಿವುಡ್ ನ ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧಿ ಮುಖವಾಡಗಳನ್ನು ಬಯಲಿಗೆ ಎಳೆದರು!

ಶ್ರೀ. ಸಂಜೀವ ನೇವರ ಅವರು ‘ ಜೆಮ್ಸ್ ಆಫ್ ಬಾಲಿವುಡ್ ‘ ಎಂಬ ಸಾಂಸ್ಕೃತಿಕ ಚಳುವಳಿಯ ಸಂಸ್ಥಾಪಕರಾಗಿದ್ದಾರೆ. ಈ ಚಳುವಳಿಯಿಂದ ಭಾರತದಲ್ಲಿನ ಅತಿ ದೊಡ್ಡ ಚಲನಚಿತ್ರ ನಿರ್ಮಾಣದ ಉದ್ಯಮದಲ್ಲಿ ಆಳವಾಗಿ ಬೇರೂರಿರುವ ‘ಹಿಂದೂ ಫೋಬಿಯ’ (ಹಿಂದೂ ದ್ವೇಷ) ‘ ಸ್ತ್ರೀ ದ್ವೇಷ ‘ ಮತ್ತು ರಾಷ್ಟ್ರ ವಿರೋಧಿ ಕಥೆಗಳ ಪ್ರಚಾರಗಳ ಹಿಂದಿನ ಉದ್ದೇಶವನ್ನು ಬಯಲು ಮಾಡಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗತೊಡಗಿದ ಧಾರಾವಾಹಿ ಶೀಘ್ರದಲ್ಲೇ ಜನಜಾಗೃತಿಯ ಮಾಧ್ಯಮವಾಯಿತು. ಆದ್ದರಿಂದ ಬಾಲಿವುಡ್ ಎಂದು ಕರೆಯಲ್ಪಡುವ ಹಿಂದಿ ಚಿತ್ರರಂಗದ ಉನ್ನತ ವರ್ಗದವರಿಗೆ ಸಾರ್ವಜನಿಕ ಪ್ರತಿಕ್ರಿಯೆ ಎದುರಾಗಬೇಕಾಯಿತು. ‘ಜೆಮ್ಸ್ ಆಫ್ ಬಾಲಿವುಡ್’ ಎಂಬ ಧಾರಾವಾಹಿಯು ಬಾಲಿವುಡ್‌ನಲ್ಲಿ ಮರೆಯಾದ ವೈಚಾರಿಕ ಗೊಂದಲವನ್ನು ಬಹಿರಂಗಗೊಳಿಸಿ, ‘ಗ್ಲ್ಯಾಮರ್’ (ಮೋಹಕ ರೂಪ) ಎಂಬ ಮಿಥ್ಯಾ ಭಾವನೆಗೆ ಮುಕ್ತಿ ನೀಡಿತು. ವಿರೋಧಿಗಳ ಕಾರ್ಯದ ಮೇಲೆ ಪ್ರಶ್ನೆ ಎತ್ತಬಲ್ಲಂತಹ ಒಂದು ಪೀಳಿಗೆಯನ್ನು ಜಾಗೃತಗೊಳಿಸಿತು.

೨. ಧರ್ಮದ ಧ್ವನಿ ಆಗಿರುವ ಶ್ರೀ. ಸಂಜೀವ ನೇವರ !

ವಂಚನೆಯ ಮತಾಂತರದ ವಿರುದ್ಧ ಶ್ರೀ. ಸಂಜೀವ ನೇವರ ಅವರು ನಿರಂತರ ಅಭಿಯಾನಗಳನ್ನು ಆರಂಭಿಸಿದರು. ಈ ಅಭಿಯಾನಗಳಿಂದಾಗಿ ಅವರು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದರು. ವಿಶೇಷವಾಗಿ ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಪೂರೈಸುವ ಮತ್ತು ದ್ವೇಷಪೂರಿತ ಭಾಷಣ ಮಾಡುವ ಹಿಂದೂದ್ವೇಷಿ ಡಾ. ಝಾಕೀರ್ ನಾಯಿಕ್ ವಿರುದ್ಧ ಶ್ರೀ. ನೇವರ ಅವರು ಧ್ವನಿಯೆತ್ತಿದರು. ಶ್ರೀ. ನೇವರ ಅವರು ಅಗ್ನಿ ಸಮಾಜದ ಬಗ್ಗೆ ಹಬ್ಬಿಸಿರುವ ಸುಳ್ಳು ವದಂತಿಗಳನ್ನು ನಾಶಪಡಿಸಿದರು. ವೈದಿಕ ಧರ್ಮವನ್ನು ಅತ್ಯಂತ ಸ್ಪಷ್ಟವಾಗಿ ಎಲ್ಲರ ಎದುರು ಪ್ರಸ್ತುತಪಡಿಸಿದರು. ಅವರ ‘ಅಗ್ನಿ ಸಮಾಜ’ ಎಂಬ ಅಭಿಯಾನದ ಅಡಿಯಲ್ಲಿ ಸ್ಥಾಪಿತವಾದ ಈ ಚಳವಳಿಗೆ ಅಭೂತಪೂರ್ವ ಸಾಹಿತ್ಯ, ಪ್ರಸಾರವಾಗುವ ಡಿಜಿಟಲ್ ಅಭಿಯಾನಗಳಿಗಾಗಿ ಬಳಸಿದ ಬರಹ ಮತ್ತು ಸಾವಿರಾರು ಯುವ ಮನಸ್ಸುಗಳಿಗೆ ಬೌದ್ಧಿಕ ಮಟ್ಟದಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ನೀಡಿದ ಮಾರ್ಗದರ್ಶನದ ಮೂಲಕ ಇದೀಗ ಅದಕ್ಕೆ ಶಕ್ತಿಶಾಲಿ ರೂಪ ಸಿಕ್ಕಿದೆ. ಈ ಪ್ರಬೋಧನೆಯ ಫಲವಾಗಿ, ಒಂದೇ ಸಮಯದಲ್ಲಿ ಝಾಕೀರ್ ನಾಯಿಕ್ ಅವರಂತಹವರ ಧರ್ಮಾಂತರದ ಪ್ರಚಾರದ ಮೋಹಕ್ಕೆ ಒಳಗಾಗಿದ್ದ ಅನೇಕ ಜನರು ಸಹ ಚಿಂತನೆಗೆ ಪ್ರೇರಿತರಾಗಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ‘ಸಾಂಸ್ಕೃತಿಕ ಯೋಧ ‘ ಪ್ರಶಸ್ತಿ ಸ್ವೀಕರಿಸುವಾಗ ಶ್ರೀ. ಸಂಜೀವ ನೇವರ (ಎಡದಿಂದ)

೩. ಪ್ರತ್ಯಕ್ಷ ಕಾರ್ಯ ಮಾಡುವುದಕ್ಕೆ ಒತ್ತು

ಶ್ರೀ. ಸಂಜೀವ ನೇವರ ಅವರು ಕೇವಲ ಸಿದ್ದಾಂತವಾದಿಗಳಷ್ಟೇ ಅಲ್ಲ. ಪ್ರತ್ಯಕ್ಷವಾಗಿ ಪರಿವರ್ತನೆ ಎಂಬುದು ಕಾರ್ಯದ ಸ್ಥರದಲ್ಲಿ ನಡೆಯುತ್ತದೆ, ಎಂಬ ವಿಶ್ವಾಸ ಅವರದಾಗಿದೆ. ಈ ವಿಶ್ವಾಸದ ಕಾರಣ ಅವರು ‘ ಸೇವಾ ನ್ಯಾಯ ಉತ್ಥಾನ ಫೌಂಡೇಶನ್ ‘ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಫೌಂಡೇಶನ್ ನಿಂದ ನೂರಾರು ಪಾಕಿಸ್ತಾನಿ ಸ್ಥಳಾಂತರಿತ ಹಿಂದೂ ಕುಟುಂಬಗಳ ಪುನರ್ವಸತಿಗೆ ಸಹಾಯ ಮಾಡಿದೆ. ಅವರ ಉಸ್ತುವಾರಿಯಲ್ಲಿ ಫೌಂಡೇಶನ್ ವತಿಯಿಂದ ಸ್ಥಳಾಂತರಿತ ಮಕ್ಕಳಿಗೆ ‘ ಮಾರ್ಷಲ್ ಆರ್ಟ್ಸ್ ‘ ನ ಪ್ರಶಿಕ್ಷಣ ನೀಡಲಾಗಿದೆ. ಈ ವಿದ್ಯಾರ್ಥಿಗಳು ಜಯಪುರ (ರಾಜಸ್ಥಾನ)ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುವರ್ಣ ಮತ್ತು ರಜತ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದಾರೆ.

೪. ಅತ್ಯಂತ ನಿರ್ಲಕ್ಷಿತ ಹಿಂದುಳಿದ ಪ್ರದೇಶದಲ್ಲಿ ತಂತ್ರಜ್ಞಾನದ ಸಹಾಯದಿಂದ ಕ್ರಾಂತಿ

ಶ್ರೀ. ನೇವರ ಅವರ ಮಾರ್ಗದರ್ಶನದಲ್ಲಿ ಈ ಫೌಂಡೇಶನ್ ‘ ಸ್ಟೆಮ್ ‘ ಶಿಕ್ಷಣದಲ್ಲಿಯೂ ಕೂಡ (STEM education – encompasses teaching and learning in Science, Technology, Engineering and Mathematics – ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣ ) ಪ್ರಶಂಸನೀಯ ಘಟ್ಟವನ್ನು ತಲುಪಿದೆ. ಅವರು ಪಾಕಿಸ್ತಾನದಿಂದ ಸ್ಥಳಾಂತರಿತಗೊಂಡ ಹಿಂದೂ ಮಕ್ಕಳಿಗೆ ‘ ರೋಬೋಟಿಕ್ಸ್ ‘ ನ ಪ್ರಶಿಕ್ಷಣದ ನೇತೃತ್ವ ಕೂಡ ನೀಡಿದ್ದಾರೆ. ಇದರ ಪ್ರೇರಣೆ ಪಡೆದು ಅವರು ಉತ್ತರಪ್ರದೇಶದಲ್ಲಿನ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಸಂಬಲ್ ನ ಸರಕಾರಿ ಶಾಲೆಯಲ್ಲಿ ವಿಕಲಾಂಗ ಮತ್ತು ವಂಚಿತ ಮಕ್ಕಳಿಗಾಗಿ ಇಂತಹ ಪ್ರಶಿಕ್ಷಣವನ್ನು ಸಹ ಆರಂಭಿಸಿದ್ದಾರೆ.

ಮಾರ್ಚ್ ೨೦೨೫ ರಲ್ಲಿ ಶ್ರೀ. ಸಂಜೀವ ನೇವರ ಅವರ ಮಾರ್ಗದರ್ಶನದಲ್ಲಿ ಪ್ರಶಿಕ್ಷಣ ಪಡೆದಿರುವ ಐದನೇ ತರಗತಿಯಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳು ‘ ಐಐಟಿ ದೆಹಲಿ’ ಯ ೩೫ ಇಂಜಿನಿಯರಿಂಗ್ ವಿಷಯಗಳಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದಿದ್ದಾರೆ. ಇದು ಬಹಳ ವಿಶೇಷವಾದ ಸಾಧನೆಯಾಗಿತ್ತು. ಇದರಿಂದ ಎಲ್ಲಾಅನೇಕ ಅನುಭವಿ ತಂತ್ರಜ್ಞಾನ ಮಾರ್ಗದರ್ಶಕರು ಆಶ್ಚರ್ಯ ಚಕಿತರಾದರು.

ಪಾಕಿಸ್ತಾನಿ ಸ್ಥಳಾಂತರಿತ ಹಿಂದೂ ಯುವತಿಯರ ಜೊತೆ ಶ್ರೀ. ಸಂಜೀವ ನೇವರ

೫. ವೇದಗಳನ್ನು ಪುನರುಜ್ಜೀವನಗೊಳಿಸುವ ಚಳುವಳಿ

ಶ್ರೀ ಸಂಜೀವ ನೇವರ ಅವರ ದೃಷ್ಟಿಕೋನವು ಸಮಾಜಸೇವೆಗೆ ಸೀಮಿತವಿಲ್ಲ. ಅವರ ಪ್ರಕಾರ, ‘ವೈದಿಕ ಪಂಡಿತರು ಶಿಕ್ಷಣ, ನೈತಿಕತೆ, ನಾಯಕತ್ವ ಮತ್ತು ನವಸೃಷ್ಟಿಗೆ ದಾರಿ ತೋರಿಸಬೇಕು.’’ ‘ಅಗ್ನಿ ಸಮಾಜ’ದಡಿಯಲ್ಲಿ ಅವರ ಪ್ರಮುಖ ಉಪಕ್ರಮವೇ ವೇದ ಹಾಗೂ ಸಂಸ್ಕೃತದ ‘ಮಾಸ್ಟರ್ ಕ್ಲಾಸ್’ ತೆಗೆದುಕೊಳ್ಳುವುದು’ (ಅತಿವಿಶಿಷ್ಟ ವಿದ್ಯಾರ್ಥಿಗಳಿಗೆ ನಡೆಸಲಾಗುವ ತರಗತಿಗಳು), ಇದು ಅವರ ದೃಷ್ಟಿಕೋನವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಶ್ರೀ ನೇವರ ಅವರು ತತ್ವಗಳನ್ನು ಆಧಾರವನ್ನಾಗಿಸಿಕೊಂಡು ಪ್ರಾಚೀನ ಧರ್ಮಗ್ರಂಥಗಳನ್ನು ಬೋಧಿಸುತ್ತಾರೆ. ಅವರು ಸಾಧಕರಿಗೆ ತರ್ಕಶಾಸ್ತ್ರ, ಭಾಷೆ ಮತ್ತು ಜೀವನಾನುಭವಗಳ ಮೂಲಕ ಧರ್ಮವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಸಾವಿರಾರು ಜನರು ಅವರ ಈ ತರಗತಿಗಳನ್ನು ಈಗಾಗಲೇ ಅನುಭವಿಸಿದ್ದಾರೆ ಮತ್ತು ತಮ್ಮ ಜೀವನ ಪ್ರವಾಸದ ಒಂದು ಮಹತ್ವದ ಹಂತವೆಂದು ತಿಳಿಸಿರುವುದು ವಿಶೇಷ. ಒಬ್ಬ ವಿದ್ಯಾರ್ಥಿ ಶ್ರೀ ಸಂಜೀವ ನೇವರ ಅವರ ಕಾರ್ಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೆ ಬರೆದಿದ್ದಾರೆ: ‘ಸಂಜೀವಜಿಯವರ ತರಗತಿಗಳು ಎಷ್ಟೊಂದು ಸಮೃದ್ಧವಾಗಿದೆ ಎಂದರೆ, ಅವರು ಇನ್ನೂ ೨ ಗಂಟೆ ಮಾತನಾಡಲಿ ಎಂದು ನನಗೆ ತೀವ್ರ ಇಚ್ಛೆಯಾಗುತ್ತದೆ! ಅವರಿಂದ ಕಲಿಯಲು ತುಂಬಾ ಇದೆ.’


ವೇದಗಳಲ್ಲಿನ ಸರ್ವೋಚ್ಛ ಜ್ಞಾನ ಮತ್ತು ಮಾರ್ಗದರ್ಶಕ ತತ್ವಗಳಿಂದ ಪ್ರೇರಣೆ ದೊರೆತಿದೆ !


ಶ್ರೀ. ಸಂಜೀವ ನೇವರ ಅವರಿಗೆ ‘ ಇಷ್ಟೊಂದು ಮಹಾನ ಕಾರ್ಯ ಮಾಡಲು ಎಲ್ಲಿಂದ ಪ್ರೇರಣೆ ಸಿಗುತ್ತದೆ ? ಇದರ ಬಗ್ಗೆ ಅವರು ಹೇಳುವುದೇನೆಂದರೆ,’ ಅದು ಒಂದು ಸತ್ಯದ ಆಳವಾದ ಶೋಧವಾಗಿದೆ. ಶಾಲೆಯ ದಿನಗಳಲ್ಲಿ ವಿದ್ಯಾರ್ಥಿ ಆಗಿರುವಾಗ ನಾನು ನನ್ನ ಬಹಳಷ್ಟು ಸಮಯ ಬೇರೆ-ಬೇರೆ ಪರಂಪರೆಯಲ್ಲಿನ ಧಾರ್ಮಿಕ ಗ್ರಂಥಗಳನ್ನು ಓದುವುದರಲ್ಲಿ ಕಳೆದಿದ್ದೇನೆ. ವಿಶೇಷವಾಗಿ ನಾನು ತೆರೆದ ಮನಸ್ಸಿನಿಂದ ಬೇರೆ-ಬೇರೆ ಧರ್ಮದ ಅಭ್ಯಾಸ ಮಾಡಿದ್ದೇನೆ. ಆ ಪ್ರವಾಸದಿಂದ ಕೊನೆಗೆ ನಾನು ವೇದಗಳ ಕಡೆಗೆ ಹೋರಳಿದೆ. ಅದರಲ್ಲಿ ನನಗೆ ಜೀವನಕ್ಕಾಗಿ ಸರ್ವೋಚ್ಚ ಜ್ಞಾನ ಮತ್ತು ಮಾರ್ಗದರ್ಶಕ ತತ್ವಗಳು ಕಂಡು ಬಂದವು. ಮೋಕ್ಷ ಎಂಬುದು ನನ್ನ ಅಂತಿಮ ಧ್ಯೇಯವಾಗಿದೆ. ಈ ಶ್ರದ್ಧೆಯಿಂದ ನಾನು ಏನೆಲ್ಲಾ ಮಾಡುತ್ತಿದ್ದೇನೆಯೋ, ಅದು ನನ್ನ ವೈಯಕ್ತಿಕ ಆಯ್ಕೆಯಿಂದ ಸಂಪೂರ್ಣ ಜಗತ್ತಿನಲ್ಲಿನ ನನ್ನ ಧ್ಯೇಯವನ್ನು ರೂಪಿಸಿದೆ.

೬. ಶಾಸ್ತ್ರ, ರಣನೀತಿ ಮತ್ತು ಶೌರ್ಯ ಇವುಗಳ ಶಕ್ತಿ ಹೊಂದಿರುವ ಸಂಜೀವ ನೇವರ !

ಪಾಣಿನಿಯ ವ್ಯಾಕರಣವನ್ನು ವಿವರಿಸುವ ಕಾರ್ಯವಾಗಿರಲಿ, ದಲಿತ ವಸತಿಗೃಹದಲ್ಲಿರುವ ಮಕ್ಕಳಿಗೆ ಮಾರ್ಗದರ್ಶನ ಮಾಡುವುದಾಗಿರಲಿ ಅಥವಾ ರಾಷ್ಟ್ರೀಯ ದೂರದರ್ಶನದಲ್ಲಿನ ನಕಲಿ ‘ನೆರೇಟಿವ್’ (ಕಥಾನಕ)ನ್ನು ನಿಖರವಾಗಿ ಭೇದಿಸುವುದಾಗಿರಲಿ — ಸಂಜೀವ ನೇವರ ಎಂಬವರು ಶಾಸ್ತ್ರ, ಯುಕ್ತಿ ಹಾಗೂ ಶೌರ್ಯದಿಂದ ಕೂಡಿರುವ ಒಂದು ಶಕ್ತಿಯ ಪ್ರತಿರೂಪವಾಗಿದ್ದಾರೆ.

ಅವರು ಕೇವಲ ಧರ್ಮದ ಪರವಾಗಿ ಮಾತನಾಡುವುದಿಲ್ಲ, ಬದಲಾಗಿ ಮಕ್ಕಳ ಮತ್ತು ಯುವಕರ ಭವಿಷ್ಯ ರೂಪಿಸುವ ಮಹತ್ತರ ಕಾರ್ಯದಲ್ಲಿಯೂ ಕೂಡ ಸಕ್ರಿಯವಾಗಿ ತೊಡಗಿದ್ದಾರೆ.

ಸಂಕಲನ : ಅಗ್ನಿ ಸಮಾಜ ಪರಿವಾರ