12 ಮುಸಲ್ಮಾನರ ಬಂಧನ
ರಾಮಪುರ (ಉತ್ತರಪ್ರದೇಶ) – ಇಲ್ಲಿನ ಸಿಕಂದರಾಬಾದ ಗ್ರಾಮದಲ್ಲಿ ಮಾರ್ಚ್ 7ರ ರಾತ್ರಿ ಶಿವನ ದೇವಸ್ಥಾನದಲ್ಲಿ ಧ್ವನಿವರ್ಧಕದಲ್ಲಿ ಭಜನೆ ಹಾಕಿದ್ದಕ್ಕಾಗಿ ಮುಸಲ್ಮಾನರು ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 12 ಮುಸಲ್ಮಾನರನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಸದ್ಯ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
Rampur, Uttar Pradesh — Shiva temple Pujari assaulted by a group of Mu$l!ms objecting to the sound of the temple's loudspeaker – 12 arrested
If the Mu$l!ms felt that the loudspeaker volume exceeded permissible limits, why didn’t they file a Police complaint? The Police could… pic.twitter.com/Hgp5PVVXGn
— Sanatan Prabhat (@SanatanPrabhat) March 9, 2025
1. ಶಿವನದೇವಸ್ಥಾನದ ಅರ್ಚಕರಾದ ಪ್ರೇಮ ಸಿಂಗ ಅವರು ತಮ್ಮ ಲಿಖಿತ ದೂರಿನಲ್ಲಿ, ದೇವಸ್ಥಾನದ ಧ್ವನಿವರ್ಧಕದಲ್ಲಿ ಭಜನೆ ಹಾಕಿದ ನಂತರ ಗ್ರಾಮದ ನಿವಾಸಿಗಳಾದ ಭೂರಿ, ತೌಫಿಕ, ಇಕ್ಬಾಲ, ಛಿದ್ಧಾ, ಇಸ್ರಾಯಿಲ, ಶೈದಾ, ಶಕೀಲ್, ಮುನ್ಸಾ ಅಲಿ, ಗುಲ್ನಾಜ, ಅನೀಸ್ ಮುಂತಾದವರು ದೇವಸ್ಥಾನದ ಆವರಣದಲ್ಲಿ ನುಗ್ಗಿ ಧ್ವನಿವರ್ಧಕದಲ್ಲಿ ಭಜನೆ ಹಾಕುವುದನ್ನು ವಿರೋಧಿಸಿ ಅಪಶಬ್ದಗಳಲ್ಲಿ ನಿಂದಿಸಿದ್ದಾರೆ. ನಾನು ಅವರನ್ನು ವಿರೋಧಿಸಿದಾಗ, ಅವರು ನನ್ನನ್ನು ದೇವಸ್ಥಾನದಿಂದ ಹೊರಗೆ ಎಳೆದು ಹಲ್ಲೆ ಮಾಡಿದರು, ಅಲ್ಲದೇ ಪುನಃ ಧ್ವನಿವರ್ಧಕದಲ್ಲಿ ಭಜನೆ ಹಾಕಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು, ಎಂದು ತಿಳಿಸಿದ್ದಾರೆ.
2. ಪೊಲೀಸ್ ಇನ್ಸ್ಪೆಕ್ಟರ್ ಓಂಕಾರ ಸಿಂಗ್ ಅವರು ಮಾತನಾಡಿ, ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ಮಹಿಳೆಯೊಬ್ಬರು ಪೂಜಾರಿಗೆ ಧ್ವನಿವರ್ಧಕದ ಶಬ್ದವನ್ನು ರಂಜಾನ್ನ ಅಜಾನ್ ಕೇಳಲು ಅನುಕೂಲವಾಗುವಂತೆ ಕಡಿಮೆ ಮಾಡಲು ಹೇಳಿದ್ದರು. ಈ ವಿಷಯವಾಗಿ ಪೂಜಾರಿಯೊಂದಿಗೆ ಗ್ರಾಮದ ಕೆಲವು ಜನರೊಂದಿಗೆ ವಾಗ್ವಾದ ನಡೆಯಿತು; ಆದರೆ ಹೊಡೆದಾಟದ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|