Meat Found at Hanuman Temple : ಭಾಗ್ಯನಗರ (ತೆಲಂಗಾಣ) ಇಲ್ಲಿ ದೇವಸ್ಥಾನದಲ್ಲಿ ಮಾಂಸ ಪತ್ತೆ!

ಘಟನೆಯಿಂದ ಬಿಗುವಿನ ವಾತಾವರಣ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಟಪ್ಪಾಚಬುತ್ರಾ ಪ್ರದೇಶದ ಹನುಮಾನ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ಮಾಂಸವನ್ನು ಇಟ್ಟಿರುವುದು ಕಂಡಬಂದ ನಂತರ ಇಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು. ಇಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಉಪ ಪೊಲೀಸ್ ಆಯುಕ್ತ ಚಂದ್ರ ಮೋಹನ್ ಮಾತನಾಡಿ, ನಾವು ಘಟನಾಸ್ಥಳವನ್ನು ತಲುಪಿದಾಗ ದೇವಸ್ಥಾನದ ಬಾಗಿಲುಗಳು ಮುಚ್ಚಿದ್ದವು. ಯಾರೋ ಪ್ರಾಣಿ ಮಾಂಸವನ್ನು ಒಳಗೆ ತಂದಿರಬಹುದು ಎಂದು ನಮಗೆ ಅನುಮಾನವಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ’, ಎಂದು ಹೇಳಿದರು.

ಈ ಮೇಲೆ ಪ್ರಕಟಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡಿರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು

 

ಸಂಪಾದಕೀಯ ನಿಲುವು

  • ದೇಶದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ; ಆದರೆ ಈ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿರುವುದು ಕಂಡು ಬರುವುದಿಲ್ಲ. ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
  • ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕಣ್ಣೆತ್ತಿ ನೋಡಲು ಯಾರಿಗೂ ಧೈರ್ಯವಾಗದಂತೆ ಮಾಡಬೇಕು. ಇದಕ್ಕಾಗಿ ಹಿಂದೂ ರಾಷ್ಟ್ರ ಬೇಕು !