ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಲುಕ ಪೀಠದ ಶ್ರೀ ರಾಜೇಂದ್ರ ದಾಸ ಮಹಾರಾಜರನ್ನು ಭೇಟಿ

ಮಲೂಕ ಪೀಠದ ಶ್ರೀ ರಾಜೇಂದ್ರ ದಾಸ ಮಹಾರಾಜರು (ಕುಳಿತುಕೊಂಡಿರುವವರು) ಅವರಿಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿರುವಾಗ (ಬಲಗಡೆಯಿಂದ) ಸದ್ಗುರು ನೀಲೇಶ ಸಿಂಗಬಾಳ ಮತ್ತು ಸದ್ಗುರು ಡಾ. ಚಾರುದತ್ತ ಪಿಂಗಳೆ

ಪ್ರಯಾಗರಾಜ, ಫೆಬ್ರವರಿ 9 (ಸುದ್ದಿ) – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಸಮಿತಿಯ ಧರ್ಮ ಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಅವರು ಮಲುಕ ಪೀಠದ ಶ್ರೀ ರಾಜೇಂದ್ರ ದಾಸ ಮಹಾರಾಜರನ್ನು ಭೇಟಿಯಾಗಿ ಸನ್ಮಾನಿಸಿದರು. ಈ ಮಂಗಲಮಯ ಸಂದರ್ಭದಲ್ಲಿ ಸಮಿತಿಯು ಮಾಡುತ್ತಿರುವ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕುಂಭ ಕ್ಷೇತ್ರದಲ್ಲಿರುವ ಸಮಿತಿಯ ಕಕ್ಷೆಗೆ ಬರಲು ಅವರನ್ನು ಆಹ್ವಾನಿಸಲಾಯಿತು.