Nijjar Murder Case : ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತದ ಯಾವುದೇ ಪಾತ್ರವಿಲ್ಲ!

ಕೆನಡಾ ಸರಕಾರವು ಸ್ಥಾಪಿಸಿದ ಆಯೋಗದಿಂದ ತೀರ್ಪು !

ಭಯೋತ್ಪಾದಕ ನಿಜ್ಜರ್, ಪ್ರಧಾನಿ ಜಸ್ಟಿನ್ ಟ್ರುಡೊ

ಒಟಾವಾ (ಕೆನಡಾ) – ಕೆನಡಾ ಸ್ಥಾಪಿಸಿದ ಮೇರಿ ಜೋಸಿ ಹಾಗ್ ಆಯೋಗವು, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವರದಿ ಮಾಡಿದೆ. ಅದೇ ಸಮಯದಲ್ಲಿ, ನಿಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಸುಳ್ಳು ಮಾಹಿತಿಯನ್ನು ಹರಡಿದೆ ಎಂದು ವರದಿಯಲ್ಲಿ ಹೇಳಿದೆ.

1. ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಜೂನ್ 18, 2023 ರಂದು ಕೊಲೆ ಮಾಡಲಾಯಿತು. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ರಾಜತಾಂತ್ರಿಕ ಸೇರಿದಂತೆ ಹಲವಾರು ಜನರು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 2023 ರ ನವೆಂಬರ್‌ನಲ್ಲಿ ದೇಶದ ಸಂಸತ್ತಿನಲ್ಲಿ ಆರೋಪಿಸಿದ್ದರು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ಬಗ್ಗೆ ತಮ್ಮ ಬಳಿ ಪುರಾವೆಗಳಿವೆ ಎಂದು ಹೇಳಿದ್ದರು. ವಾಸ್ತವವಾಗಿ, ಟ್ರೂಡೊ ಇಲ್ಲಿಯವರೆಗೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.

2. ಇದರಿಂದಾಗಿ ಭಾರತವು 41 ಕೆನಡಾದ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕಿತ್ತು. ಕೆನಡಾದ ಆರೋಪಗಳನ್ನು ಅನುಸರಿಸಿ ಭಾರತವು ಅಲ್ಲಿನ ಜನರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಆದರೆ ನಂತರ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಗಳು ನಡೆದವು ಮತ್ತು ಕೆಲವು ತಿಂಗಳುಗಳ ನಂತರ, ವೀಸಾ ಸೇವೆಗಳನ್ನು ಪುನಃಸ್ಥಾಪಿಸಲಾಯಿತು.

ಭಾರತ, ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳು ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದವು !

ಈ ವರದಿಯಲ್ಲಿ ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಭಾರತ, ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳು ಹೊಣೆ ಎಂದು ಹೇಳಿದೆ. ಅದರಲ್ಲಿ, ಕೆನಡಾದ ಚುನಾವಣೆಯಲ್ಲಿ ಭಾರತವು 3 ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹಣ ನೀಡುವ ಮೂಲಕ ಮೌನವಾಗಿ ಬೆಂಬಲ ನೀಡಿದೆ ಎಂದು ಅದು ಹೇಳುತ್ತದೆ. ಇದಕ್ಕಾಗಿ ಏಜೆಂಟ್‌ಗಳನ್ನು ಬಳಸಲಾಗಿತ್ತು.

ಭಾರತದ ವಿದೇಶಾಂಗ ಸಚಿವಾಲಯವು ವರದಿಯಲ್ಲಿನ ಈ ದಾವೆಯನ್ನು ತಿರಸ್ಕರಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಕೆನಡಾ ಭಾರತದ ಆಂತರಿಕ ವ್ಯವಹಾರಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದು ವಾಸ್ತವವಾಗಿದೆ.

ಸೆಪ್ಟೆಂಬರ್ 2023 ರಲ್ಲಿ, ಕೆನಡಾದ ಗುಪ್ತಚರ ಸಂಸ್ಥೆಯೊಂದು ತನ್ನ ವರದಿಯಲ್ಲಿ, 2019 ಮತ್ತು 2021 ರಲ್ಲಿ ಕೆನಡಾದಲ್ಲಿ ನಡೆದ ಎರಡು ಚುನಾವಣೆಗಳಲ್ಲಿ ಚೀನಾ ಹಸ್ತಕ್ಷೇಪ ಮಾಡಿದೆ ಎಂದು ಹೇಳಿಕೊಂಡಿದೆ. ಜಸ್ಟಿನ್ ಟ್ರುಡೊ ಚುನಾವಣೆಯಲ್ಲಿ ಗೆಲ್ಲಲು ಚೀನಾ ಸಹಾಯ ಮಾಡಿತು. ಇದರ ನಂತರ, ಪ್ರಧಾನ ಮಂತ್ರಿ ಟ್ರುಡೊ ಸೆಪ್ಟೆಂಬರ್ 2023 ರಲ್ಲಿ ಈ ವಿಷಯದ ತನಿಖೆಗಾಗಿ ಹಾಗ್ ಆಯೋಗವನ್ನು ಸ್ಥಾಪಿಸಿದರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ವಿರುದ್ಧದ ಆರೋಪಗಳಿಗೆ ಕೆನಡಾದ ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರುಡೊ ಈಗ ಯಾವ ಪ್ರಾಯಶ್ಚಿತ್ತ ತೆಗೆದುಕೊಳ್ಳುತ್ತಾರೆ ? ಕೆನಡಾದ ಜನರು ಅವರನ್ನು ಕೇಳುವರೇ ? ಕೆನಡಾವನ್ನು ಮಾನಹಾನಿ ಮಾಡಿದ್ದಕ್ಕಾಗಿ ಅವರ ಮೇಲೆ ಕೆನಡಾದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆಯೇ ?